masthmagaa.com:
ಬಿಜೆಪಿಯ ಪವರ್ ಫುಲ್ ನಾಯಕರ ಪೈಕಿ ಒಬ್ರು ಅಂತ ಕರೆಸಿಕೊಂಡಿರೋ,ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ರಾಜಕೀಯ ನಿವೃತ್ತಿಯ ಬಗ್ಗೆ ಆಗಾಗ ಚರ್ಚೆ ನಡೀತಾ ಇರುತ್ತೆ. ಅದಕ್ಕೆ ಅವರು ಕೊಡುವ ಹೇಳಿಕೆ ಕೂಡ ಪುಷ್ಠಿ ಕೊಡ್ತಾ ಇರ್ತವೆ. ಇದೀಗ ರಾಜಕೀಯದಲ್ಲಿ ಆಸಕ್ತಿ ಕಳೆದುಕೊಂಡಿರುವ ಬಗ್ಗೆ ನಿತಿನ್ ಗಡ್ಕರಿ ಮತ್ತೊಮ್ಮೆ ಮಾತನಾಡಿದ್ದಾರೆ. ಕಾರ್ಯಕ್ರಮವೊಂದ್ರಲ್ಲಿ ಮಾತನಾಡಿದ ಗಡ್ಕರಿ ಅವರು, ನನ್ನ ಕೆಲಸ ಇಷ್ಟ ಆಗಿದ್ರೆ, ಜನರಿಗೆ ಮತ್ತೆ ನನಗೆ ವೋಟ್ ಹಾಕ್ಬೇಕು ಅಂತ ಅನ್ನಿಸಿದ್ರೆ ಮಾತ್ರ ಮತ ಹಾಕ್ಲಿ. ನಾನು ಲಿಮಿಟ್ಗಿಂತ ಹೆಚ್ಚಾಗಿ ಯಾರನ್ನೂ ಸಮಾಧಾನಪಡಿಸುವ ಕೆಲಸ ಮಾಡೋದಿಲ್ಲ. ನಾನು ನನ್ನ ಕೆಲಸಕ್ಕೆ ಬದ್ಧವಾಗಿದ್ರೂ ಸಹ ನನ್ನ ಜಾಗಕ್ಕೆ ಬೇರೆ ಯಾರಾದ್ರೂ ಬಂದ್ರು ಪರ್ವಾಗಿಲ್ಲ ಅಂತ ಗಡ್ಕರಿ ಹೇಳಿದ್ದಾರೆ. ಇತ್ತೀಚೆಗೆ ಕೂಡ ಜನರು ಯಾರಿಗೆ ಇಷ್ಟ ಪಡ್ತಾರೆ ಅವ್ರಿಗೆ ವೋಟ್ ಹಾಕ್ಲಿ. ಅದು ಅವ್ರ ಆಯ್ಕೆ ಅಂತ ಹೇಳಿದ್ರು. ರಾಜಕೀಯ ನಾಯಕರು ಈ ರೀತಿ ಹೇಳಿಕೆ ಕೊಡೋದು ತುಂಬಾ ವಿರಳ. ಅದ್ರಲ್ಲೂ ಉನ್ನತ ಸ್ಥಾನ ಹೊಂದಿರೋ ಅದು ಬಿಜೆಪಿಯಂತ ಪಕ್ಷದಲ್ಲಿ ದೊಡ್ಡ ಸ್ಥಾನದಲ್ಲಿರೋ ನಾಯಕ ಈ ರೀತಿ ಹೇಳಿಕೆ ಕೊಡೋದು ರಾಜಕೀಯ ವಲಯದಲ್ಲಿ ಆಗಾಗ ಸುದ್ದಿ ಮಾಡ್ತಾ ಇರುತ್ತೆ.
-masthmagaa.com
Contact Us for Advertisement