masthmagaa.com:
ಅಫ್ಘಾನಿಸ್ತಾನದಲ್ಲಿದ್ದ 25 ಮಂದಿ ಭಾರತೀಯರು ಮತ್ತು 43 ಮಂದಿ ಅಫ್ಘನ್ ಪ್ರಜೆಗಳು ಸೇರಿದಂತೆ 78 ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ. ಮೊದಲಿಗೆ ತಜಕಿಸ್ತಾನದ ದುಶಾನ್ಬೆಗೆ ಕಳುಹಿಸಲಾಗಿತ್ತು. ಅಲ್ಲಿಂದ ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗಿದೆ. ಇದ್ರಲ್ಲಿ ಮೂರು ಗುರುಗ್ರಂಥ ಸಾಹಿಬ್ ಜಿಯರನ್ನು ಕರೆತರಲಾಗಿದೆ. ಅಂದಹಾಗೆ ಈ ಗುರುಗ್ರಂಥ ಸಾಹಿಬ್ ಸಿಖ್ಖರ ಧರ್ಮಗ್ರಂಥ. ಇದನ್ನು ಗುರುದ್ವಾರದಲ್ಲಿ ಇರಿಸಲಾಗುತ್ತೆ. ಇದನ್ನೇ ಸಿಖ್ಖರು ಗುರು ಅಂತ ಪರಿಗಣಿಸ್ತಾರೆ. ಯಾಕಂದ್ರೆ ಸಿಖ್ಖರ 10ನೆ ಮತ್ತು ಕೊನೆಯ ಗುರು ಗೋಬಿಂದ್ ಸಿಂಗ್ 1708ರಲ್ಲಿ ಕೊನೆಯುಸಿರೆಳೆದ್ರು. ಈ ವೇಳೆ ಅವರು ತನ್ನ ನಂತರ ಯಾವುದೇ ಗುರುವನ್ನು ಫಾಲೋ ಮಾಡಬಾರದು. ಗುರು ಗ್ರಂಥ ಸಾಹಿಬ್ನ್ನೇ ಗುರುವಾಗಿ ಪರಿಗಣಿಸಬೇಕು ಅಂತ ಹೇಳಿದ್ರು. ಅಲ್ಲಿಂದ ಇಲ್ಲಿವರೆಗೆ ಸಿಖ್ಖರು ಅದನ್ನೇ ಪಾಲಿಸಿಕೊಂಡು ಬಂದಿದ್ದಾರೆ.
-masthmagaa.com
Contact Us for Advertisement