ಕಾಬೂಲ್​​ನಿಂದ 3 ಗುರುಗ್ರಂಥ ಸಾಹಿಬ್ ಹೊತ್ತು ತಂದ ವಿಮಾನ!

masthmagaa.com:

ಅಫ್ಘಾನಿಸ್ತಾನದಲ್ಲಿದ್ದ 25 ಮಂದಿ ಭಾರತೀಯರು ಮತ್ತು 43 ಮಂದಿ ಅಫ್ಘನ್ ಪ್ರಜೆಗಳು ಸೇರಿದಂತೆ 78 ಮಂದಿಯನ್ನು ಭಾರತಕ್ಕೆ ಕರೆತರಲಾಗಿದೆ. ಮೊದಲಿಗೆ ತಜಕಿಸ್ತಾನದ ದುಶಾನ್ಬೆಗೆ ಕಳುಹಿಸಲಾಗಿತ್ತು. ಅಲ್ಲಿಂದ ವಿಶೇಷ ಏರ್​ ಇಂಡಿಯಾ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗಿದೆ. ಇದ್ರಲ್ಲಿ ಮೂರು ಗುರುಗ್ರಂಥ ಸಾಹಿಬ್​​ ಜಿಯರನ್ನು ಕರೆತರಲಾಗಿದೆ. ಅಂದಹಾಗೆ ಈ ಗುರುಗ್ರಂಥ ಸಾಹಿಬ್ ಸಿಖ್ಖರ ಧರ್ಮಗ್ರಂಥ. ಇದನ್ನು ಗುರುದ್ವಾರದಲ್ಲಿ ಇರಿಸಲಾಗುತ್ತೆ. ಇದನ್ನೇ ಸಿಖ್ಖರು ಗುರು ಅಂತ ಪರಿಗಣಿಸ್ತಾರೆ. ಯಾಕಂದ್ರೆ ಸಿಖ್ಖರ 10ನೆ ಮತ್ತು ಕೊನೆಯ ಗುರು ಗೋಬಿಂದ್ ಸಿಂಗ್​ 1708ರಲ್ಲಿ ಕೊನೆಯುಸಿರೆಳೆದ್ರು. ಈ ವೇಳೆ ಅವರು ತನ್ನ ನಂತರ ಯಾವುದೇ ಗುರುವನ್ನು ಫಾಲೋ ಮಾಡಬಾರದು. ಗುರು ಗ್ರಂಥ ಸಾಹಿಬ್​​ನ್ನೇ ಗುರುವಾಗಿ ಪರಿಗಣಿಸಬೇಕು ಅಂತ ಹೇಳಿದ್ರು. ಅಲ್ಲಿಂದ ಇಲ್ಲಿವರೆಗೆ ಸಿಖ್ಖರು ಅದನ್ನೇ ಪಾಲಿಸಿಕೊಂಡು ಬಂದಿದ್ದಾರೆ.

-masthmagaa.com

Contact Us for Advertisement

Leave a Reply