masthmagaa.com:
ಜಮ್ಮು ಕಾಶ್ಮೀರದಲ್ಲಿ 11 ಮಂದಿ ಸರ್ಕಾರಿ ನೌಕರರನ್ನು ಕೆಲಸದಿಂದ ತೆಗೆದು ಹಾಕಿರೋದಕ್ಕೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಕೆರಳಿ ಕೆಂಡವಾಗಿದ್ದಾರೆ. ನಿನ್ನೆ ಈ ಬಗ್ಗೆ ಟ್ವೀಟ್ ಮಾಡಿದ್ದ ಇವರು, ರಾಷ್ಟ್ರೀಯತೆ ಹೆಸರಲ್ಲಿ ಸರ್ಕಾರ ಜಮ್ಮು ಕಾಶ್ಮೀರ ಜನರನ್ನು ದುರ್ಬಲಗೊಳಿಸ್ತಿದೆ. ಯಾವುದೇ ಆಧಾರವಿಲ್ಲದೇ 11 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿರೋದು ಅಪರಾಧ ಅಂತ ಹೇಳಿದ್ರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇವತ್ತು ಮತ್ತೆ ಪ್ರತಿಕ್ರಿಯಿಸಿ, ನಾನು ಇಲ್ಲಿ ಯಾರಿಗೂ ಸಪೋರ್ಟ್ ಮಾಡ್ತಿಲ್ಲ. ಆರೋಪಕ್ಕೆ ತಕ್ಕಂತೆ ಸರಿಯಾದ ಸಾಕ್ಷ್ಯಾಧಾರಗಳು ಸಿಗುವವರೆಗೆ ಇಂಥಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಾರದು. ಈ 11 ಜನ ಮಾತ್ರವಲ್ಲ.. ಈ ವರ್ಷ 20ರಿಂದ 25 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಅಂತ ಟ್ವೀಟ್ ಮಾಡಿದ್ದಾರೆ. ಉಗ್ರ ಸಲಾಹುದ್ದೀನ್ ಮಕ್ಕಳನ್ನು ಕೆಲಸದಿಂದ ತೆಗೆದು ಹಾಕಿರೋ ಬಗ್ಗೆ ಪ್ರತಿಕ್ರಿಯಿಸಿರೋ ಮೆಹಬೂಬಾ, ತಂದೆ ಮಾಡಿದ ತಪ್ಪಿಗೆ ಮಕ್ಕಳನ್ನು ಹೊಣೆಗಾರರನ್ನಾಗಿ ಮಾಡಬಾರದು ಅಂತಲೂ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
-masthmagaa.com
Contact Us for Advertisement