ಪ್ರಯಾಗ್​ರಾಜ್ ಹಿಂಸಾಚಾರ: ಮಾಸ್ಟರ್ ಮೈಂಡ್​​ ಅಕ್ರಮ ಮನೆ ತೆರವು, ಆಕ್ರೋಶ!

masthmagaa.com:

ಉತ್ತರ ಪ್ರದೇಶದ ಪ್ರಯಾಗರಾಜ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರೋ ಜಾವೇದ್‌ ಅಹ್ಮದ್‌ರ ಅಕ್ರಮ ಮನೆ ತೆರವು ಕಾರ್ಯಾಚರಣೆಯನ್ನ ಭಾನುವಾರ ನಡೆಸಲಾಗಿದೆ. ಈ ವೇಳೆ ಗಲಭೆಯ ಮಾಸ್ಟರ್‌ಮೈಂಡ್‌ ಅಂತ ಹೇಳಲಾಗಿದ್ದ ವೆಲ್ಫೇರ್‌ ಪಾರ್ಟಿ ಆಫ್ ಇಂಡಿಯಾದ ನಾಯಕ ಜಾವೇದ್‌ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಸಿಕ್ಕಿವೆ ಅಂತ ಪ್ರಯಾಗರಾಜ್ ಪೊಲೀಸರು ಹೇಳಿದ್ದಾರೆ. ಅಂದ್ಹಾಗೆ ಪ್ರವಾದಿ ಮಹಮ್ಮದ್‌ರ ವಿರುದ್ದ ನೂಪುರ್‌ ಶರ್ಮಾ ಹಾಗೂ ನವೀಲ್‌ ಜಿಂದಾಲ್‌ ಹೇಳಿಕೆ ಖಂಡಿಸಿ ಪ್ರಯಾಗರಾಜ್‌ನಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು.
ಇನ್ನೊಂದ್‌ ಕಡೆ ಜಾವೇದ್‌ ಮನೆ ಕೆಡವಿರೋದನ್ನ ವಿರೋಧಿಸಿ ಪ್ರಯಾಗರಾಜ್‌ನ ವಕೀಲರ ಮಂಡಳಿ ಅಲಹಾಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಇ-ಮೇಲೆ ಮೂಲಕ ಅರ್ಜಿಯನ್ನ ಸಲ್ಲಿಸಿವೆ. ಅದ್ರಲ್ಲಿ ಮನೆ ಜವೇದ್‌ ಪತ್ನಿಗೆ ಆಕೆಯ ಪೋಷಕರು ನೀಡಿದ್ರು. ಸೋ ಜಾವೇದ್‌ ಯಾವ ಮಾಲೀಕತ್ವ ಇಲ್ಲ. ಆದ್ದರಿಂದ ಈ ನೆಲಸಮ ಕಾನೂನುಬಾಹಿರ ಅಂತ ಉಲ್ಲೇಖಿಸಿದ್ದಾರೆ. ಈ ಬಗ್ಗೆ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ʻಉತ್ತರ ಪ್ರದೇಶ ಮುಖ್ಯಮಂತ್ರಿ ಅಲಹಬಾದ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಂತೆ ವರ್ತಿಸ್ತಾ ಇದ್ದಾರೆ. ಅವರೇನು ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾ? ಅವರು ಯಾರನ್ನಬೇಕಾದ್ರು ಅಪರಾಧಿ ಅಂತ ಘೋಷಿಸುತ್ತಾರೆ ಮತ್ತು ಅವರ ಮನೆಗಳನ್ನ ಬುಲ್ಡೋಜರ್‌ ತಂದು ಕೆಡವುತ್ತಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.

-masthmagaa.com

Contact Us for Advertisement

Leave a Reply