masthmagaa.com:
ಉತ್ತರ ಪ್ರದೇಶದ ಪ್ರತಾಪ್ ಘರ್ ಜಿಲ್ಲೆಯಲ್ಲಿ ಅಕ್ರಮ ಮದ್ಯ ದಂಧೆಯ ಕುರಿತು ವರದಿ ಮಾಡಿದ್ದ ಪತ್ರಕರ್ತರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎಬಿಪಿಯ ಪ್ರಾದೇಶಿಕ ಅಂಗವಾದ ಎಬಿಪಿ ಗಂಗಾದಲ್ಲಿ ಕೆಲಸ ಮಾಡುತ್ತಿದ್ದ ಸುಲಭ್ ಶ್ರೀವಾತ್ಸವ, ಇತ್ತೀಚೆಗಷ್ಟೇ ಜಿಲ್ಲೆಯ ಮದ್ಯದಂಧೆಯ ಕುರಿತು ವರದಿ ಮಾಡಿದ್ರು. ಒಂದು ದಿನದ ಹಿಂದಷ್ಟೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು, ನನಗೆ ಲಿಕ್ಕರ್ ಮಾಫಿಯಾದಿಂದ ಜೀವ ಬೆದರಿಕೆ ಇದೆ ಅಂತ ತಿಳಿಸಿದ್ರು. ಇದಾದ ಮರುದಿನವೇ ಕೆಲಸ ಮುಗಿಸಿ ಬರುತ್ತಿದ್ದಾಗ ಬೈಕ್ ಅಪಘಾತವಾಗಿದೆ. ಸೋ ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.
-masthmagaa.com
Contact Us for Advertisement