masthmagaa.com:

ಉತ್ತರಾಖಂಡ್​ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಕಿತ್ತಾಟ ಬೀದಿ ರಂಪವಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ರಾಜ್ಯ ಬಿಜೆಪಿ ಅಧ್ಯಕ್ಷ ಕೊಟ್ಟ ಹೇಳಿಕೆಗೆ ಮುಖ್ಯಮಂತ್ರಿಗಳೇ ಕ್ಷಮೆ ಕೇಳುವಂತಹ ಪರಿಸ್ಥಿತಿ ಕ್ರಿಯೇಟ್ ಆಗಿದೆ. ಅಂದ್ಹಾಗೆ ಉತ್ತರಾಖಂಡ್​ನಲ್ಲಿ ಬಿಜೆಪಿ ಸರ್ಕಾರವಿದೆ. ತ್ರಿವೇಂದ್ರ ಸಿಂಗ್ ರಾವತ್ ಅಲ್ಲಿನ ಸಿಎಂ. ಆದ್ರೆ ಇತ್ತೀಚೆಗೆ ವಿಪಕ್ಷ ನಾಯಕಿ ಇಂದಿರಾ ಹೃದಯೇಶ್ ಮಾತನಾಡುವಾಗ, ಕೆಲ ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಅಂತ ಹೇಳಿದ್ರು. ಇದಕ್ಕೆ ಪ್ರತಿಕ್ರಿಯಿಸುವ ಭರದಲ್ಲಿ ಉತ್ತರಾಖಂಡ್ ಬಿಜೆಪಿ ಅಧ್ಯಕ್ಷ ಬನ್​ಸಿಂಧರ್ ಭಗತ್​, ‘ಲೇ ಮುದುಕಿ, ನಿನ್ನನ್ನ ಯಾಕೆ ಅವರು ಸಂಪರ್ಕಿಸುತ್ತಾರೆ’ ಅಂತ ಅಪಹಾಸ್ಯ ಮಾಡಿದ್ರು. ಇದಕ್ಕೆ ಅಲ್ಲಿದ್ದವರು ಜೋರಾಗಿ ನಕ್ಕಿದ್ರು. ಇದರ ವಿಡಿಯೋ ವೈರಲ್ ಆಗಿ ತೀವ್ರ ಆಕ್ರೋಶ ಕೇಳಿ ಬಂದಿತ್ತು. ಬಿಜೆಪಿ ನಾಯಕ ಕ್ಷಮೆ ಕೇಳಬೇಕು ಅಂತ ಸ್ವತಃ ಇಂದಿರಾ ಹೃದಯೇಶ್ ಕೂಡ ಆಗ್ರಹಿಸಿದ್ರು. ಇದರ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿರುವ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಬಿಜೆಪಿ ನಾಯಕನ ಹೇಳಿಕೆಗೆ ನಾನ್ ಕ್ಷಮೆ ಕೇಳ್ತೀನಿ ಅಂತ ಬಹಿರಂಗವಾಗಿ ಅಪಾಲಜಿ ಕೇಳಿದ್ದಾರೆ.

-masthmagaa.com

Contact Us for Advertisement

Leave a Reply