masthmagaa.com:
ವಿಜಯಪುರದ ಹೋಟೆಲ್ ರೂಮ್ ಒಂದ್ರಲ್ಲಿ ಇಬ್ಬರು ಯುವಕರ ಶವ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಹೊಟೇಲ್ ರಾಜಧಾನಿಯಲ್ಲಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಶ್ರೀಕಂಠಪುರ ತಾಂಡಾದ ವಿಳಾಸದ ಆಧಾರ್ ಕಾರ್ಡ್ ನೀಡಿ ಇಂದ್ರಕುಮಾರ್ ಅನ್ನೊ ಯುವಕ ಹಾಗೂ ಇನ್ನೊಬ್ಬ ರೂಮ್ ಪಡೆದಿದ್ದಾರೆ. ರೂಮ್ ಒಳಗಡೆ ಹೋದ ಮೇಲೆ ಇಬ್ಬರು ಹೊರಗಡೆಯೇ ಬಂದಿಲ್ಲ. ಚೆಕ್ ಮಾಡಿದಾಗ ರೂಮ್ನ ಬೆಡ್ ಮೇಲೆ ಒಬ್ಬರ ಮೇಲೋಬ್ಬರು ಮಲಗಿರುವ ಸ್ಥಿತಿಯಲ್ಲಿ ಶವವಾಗಿ ಕಂಡು ಬಂದಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಒಬ್ಬನನ್ನ ಕೊಲೆ ಮಾಡಿ ಬಳಿಕ ಮತ್ತೋರ್ವ ವಿಷ ಸೇವಿಸಿ ಆತನ ಮೇಲೆ ಬಿದ್ದು ಜೀವ ಬಿಟ್ಟಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗ್ತಿದೆ ಅಂತ ಪೊಲೀಸರು ತಿಳಿಸಿದ್ದಾರೆ.
-masthmagaa.com
Contact Us for Advertisement