ರಾಮ ಜನ್ಮಭೂಮಿ ಕೇಸ್‌ನಲ್ಲಿ ನನ್ನ ಮೇಲೆ ಭಾರಿ ಒತ್ತಡವಿತ್ತು! ಹೇಳಿದ್ಯಾರು?

masthmagaa.com:

ರಾಮ ಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ಭೂಮಿ ವಿವಾದಕ್ಕೆ ಸಂಬಂಧಿಸಿದ ಕೇಸ್‌ನಲ್ಲಿ ತೀರ್ಪು ನೀಡದಂತೆ ನನ್ನ ಮೇಲೆ ಭಾರಿ ಒತ್ತಡವಿತ್ತು ಅಂತ ನಿವೃತ್ತ ನ್ಯಾಯಮೂರ್ತಿ ಸುಧೀರ್‌ ಅಗರ್ವಾಲ್‌ ಹೇಳಿದ್ದಾರೆ. ಸಭೆಯೊಂದ್ರಲ್ಲಿ ಮಾತಾಡಿರುವ ಸುಧೀರ್‌, ಪ್ರಕರಣದ ತೀರ್ಪು ಮುಂದೂಡುವಂತೆ ಮನೆಯಿಂದ ಮತ್ತು ಮನೆಯ ಹೊರಗೆ ನನಗೆ ಒತ್ತಡ ಹೇರಲಾಗ್ತಿತ್ತು. ಆ ತೀರ್ಪನ್ನ ಆಗ ನೀಡದೇ ಇದ್ರೆ ಬಹುಶಃ ಇನ್ನೂ 200 ವರ್ಷಗಳ ಕಾಲ ಆ ವಿವಾದವನ್ನ ಎಳೆದಾಡಲಾಗ್ತಿತ್ತು. ಅಂದ್ಹಾಗೆ 2010ರ ಸೆಪ್ಟೆಂಬರ್‌ 30ರಂದು ಈ ವಿವಾದಕ್ಕೆ ಸಂಬಂಧಿಸಿ ಮಹತ್ತರ ತೀರ್ಪು ನೀಡಿದ್ದ ಉತ್ತರ ಪ್ರದೇಶ ಹೈಕೋರ್ಟ್‌ನ ನ್ಯಾಯಪೀಠದಲ್ಲಿದ್ದ ಜಡ್ಜ್‌ಗಳಲ್ಲಿ ಸುಧೀರ್‌ ಅವ್ರು ಒಬ್ರಾಗಿದ್ರು.

-masthmagaa.com

Contact Us for Advertisement

Leave a Reply