MP ಎಲೆಕ್ಷನ್‌ ಮುನ್ನವೇ ವೈನಾಡಿನಲ್ಲಿ ರಾಹುಲ್‌ ಗಾಂಧಿಗೆ ಭಾರಿ ಹಿನ್ನಡೆ!

masthmagaa.com:

ಈ ಬಾರಿ ಮತ್ತೊಮ್ಮೆ ಕೇರಳದ ವೈನಾಡಿನಿಂದ ಲೋಕ ಅಖಾಡಕ್ಕೆ ಇಳಿದಿರೊ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಭಾರಿ ಹಿನ್ನಡೆಯಾಗಿದೆ. ವೈನಾಡ್‌ ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಪಿ.ಎಮ್.‌ ಸುಧಾಕರನ್‌ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಕಾಂಗ್ರೆಸ್‌ ತನ್ನಅಸ್ಥತ್ವ ಕಳ್ಕೊಂಡಿದೆ ಹಾಗೂ ರಾಹುಲ್‌ ಗಾಂಧಿ ಎಂ.ಪಿ ಆದಾಗಿನಿಂದ ವೈನಾಡಿನತ್ತ ತಿರುಗಿ ನೋಡಿಲ್ಲ . ಹೀಗಾಗಿ ನಾನು ಕಾಂಗ್ರೆಸ್‌ ಪಕ್ಷದಿಂದ ಹೊರಬಂದೆ ಅಂತ ಸುಧಾಕರನ್‌ ಹೇಳಿದ್ದಾರೆ. ಇನ್ನು ಇದೇ ಕೇರಳದಲ್ಲಿ ಸಿಎಂ ಪಿಣರಾಯಿ ವಿಜಯನ್‌ ಹಾಗೂ ರಾಹುಲ್‌ ಗಾಂಧಿ ವಾಕ್‌ಸಮರ ಕುರಿತಂತೆ ಪ್ರಿಯಂಕಾ ಗಾಂಧಿ ಮಾತನಾಡಿದ್ದಾರೆ. ಕೇರಳ ಸಿಎಂ ಕಾಂಪ್ರೊಮೈಸ್‌ ಆಗಿದ್ದಾರೆ. ಹೀಗಾಗಿ ಅವ್ರು ಬಿಜೆಪಿ ವಿರುದ್ದ ಎಂದಿಗೂ ಮಾತಾಡಲ್ಲ..ಕೇವಲ ನನ್ನ ಸಹೋದರ ರಾಹುಲ್‌ ಮತ್ತು ಕಾಂಗ್ರೆಸ್‌ ವಿರುದ್ದ ಮಾತ್ರ ದಾಳಿ ಮಾಡ್ತಾರೆ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply