masthmagaa.com:
ಕಾಂಗ್ರೆಸ್ ನಾಯಕತ್ವದ ಕುರಿತು ಚರ್ಚೆ ಎದ್ದಿರೋ ಹೊತ್ತಲ್ಲೇ ಇದೀಗ ಪಕ್ಷದ ಅಧ್ಯಕ್ಷ ಸ್ಥಾನವನ್ನ ಮತ್ತೆ ರಾಹುಲ್ ಗಾಂಧಿಯೇ ವಹಿಸಿಕೊಳ್ಳುವಂತೆ ಒತ್ತಾಯ ಮಾಡ್ತೀವಿ ಅಂತ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನಾ ಖರ್ಗೆ ಹೇಳಿದ್ದಾರೆ. ಪಕ್ಷವನ್ನ ಮುನ್ನೆಡೆಸೋಕೆ ಸಾಕಷ್ಟು ಜನಪ್ರಿಯತೆ ಹೊಂದಿರಬೇಕು.ಇಡೀ ಕಾಂಗ್ರೆಸ್ ಪಕ್ಷ ಒಪ್ಪಿಕೊಂಡಿರೋ ವ್ಯಕ್ತಿಯಾಗಿರಬೇಕು. ಅಂತಹ ವ್ಯಕ್ತಿ ಯಾರಿದ್ದಾರೆ ಹೇಳಿ? ರಾಹುಲ್ ಗಾಂಧಿಯವರೇ ಇದಕ್ಕೆ ಸೂಕ್ತವಾದ ವ್ಯಕ್ತಿ ಅಂತ ಹೇಳಿದ್ದಾರೆ. ಇನ್ನು ಅತ್ತ ಕಾಂಗ್ರೆಸ್ನಿಂದ ಹೊರಬಂದಿರೋ ಗುಲಾಂ ನಬಿ ಆಜಾದ್ ಹೊಸ ಪಕ್ಷವನ್ನ ಕಟ್ಟೋದಾಗಿ ಅನೌನ್ಸ್ ಮಾಡಿದ್ದಾರೆ. ಅದ್ರ ಬೆನ್ನಲ್ಲೇ ಜಮ್ಮುಕಾಶ್ಮೀರ ಕಾಂಗ್ರೆಸ್ ಘಟಕದ 8 ನಾಯಕರು ಕಾಂಗ್ರೆಸ್ಗೆ ಗುಡ್ಬೈ ಹೇಳಿದ್ದಾರೆ. ಇದ್ರಲ್ಲಿ ಮೂರು ಜನ ಮಾಜಿ ಮಂತ್ರಿಗಳು ಕೂಡ ಇದ್ದಾರೆ. ಇವ್ರೆಲ್ಲ ಈಗ ಆಜಾದ್ ಅವ್ರನ್ನ ಬೆಂಬಲಿಸೋದಾಗಿ ಹೇಳಿದ್ದಾರೆ. ಅಮಿತ್ ಶಾ ಕೂಡ ತಮ್ಮ ಬಿಜೆಪಿ ಘಟಕದ ಸಭೆ ನಡೆಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಡೀಟೇಲ್ಡ್ ಮಾಹಿತಿಯನ್ನ ಇವತ್ತಿನ ವೀಕ್ಲಿ ಪಾಲಿಟಿಕಲ್ ಅನಾಲಿಸಿಸ್ನಲ್ಲಿ ಕೊಟ್ಟಿದೀವಿ. ಫುಲ್ನ್ಯೂಸ್ ಕೊನೆಗೆ ನೀವು ಅದನ್ನ ನೋಡಬಹುದು.
-masthmagaa.com
Contact Us for Advertisement