masthmagaa.com:
ದೇಶದಲ್ಲಿ ಮಹಾರಾಷ್ಟ್ರ ಬಳಿಕ ಅತಿ ಹೆಚ್ಚು ಪ್ರಕರಣಗಳನ್ನು ನೋಡ್ತಿರೋ ಪಶ್ಚಿಮ ಬಂಗಾಳದಲ್ಲಿ ನಡೀತಿರೋ ಗಂಗಾಸಾಗರ ಮೇಳ ಆತಂಕ ಮೂಡಿಸಿದೆ. ಸಾಗರ ದ್ವೀಪದಲ್ಲಿ ನಡೆಯೋ ವಾರ್ಷಿಕ ಮೇಳಕ್ಕೆ ಅಂತ ಈಗಾಗಲೇ ಹತ್ತಾರು ಸಾವಿರ ಜನ ಬಂದಿದ್ದು, ಈ ಸಂಖ್ಯೆ 10 ಲಕ್ಷ ತಲುಪಬಹುದು ಅಂತ ಅಂದಾಜಿಸಲಾಗಿದೆ. ಜನವರಿ 14ರ ಮಕರ ಸಂಕ್ರಾಂತಿಯಂದು ಈ ಭಾಗಕ್ಕೆ ಭೇಟಿ ನೀಡಿ, ಮುಳುಗಿ ಏಳೋದು ಒಂದು ವಾಡಿಕೆಯಾಗಿದೆ.
-masthmagaa.com
Contact Us for Advertisement