ಇಂದಿರಾ ಗಾಂಧಿ ಚಂದಿರನ ಬಳಿ ಹೋದಾಗ…? ದೀದಿ ಹೇಳಿದ್ದೇನು?

masthmagaa.com:

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಚಂದಿರನ ಅಂಗಳಕ್ಕೆ ತಲುಪಿದ್ದರು ಅಂತ ಹೇಳುವ ಮೂಲಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎಡವಟ್ಟು ಮಾಡಿಕೊಂಡಿದ್ದಾರೆ. ರ‍್ಯಾಲಿಯೊಂದ್ರಲ್ಲಿ ದೇಶದ ಮೊದಲ ಬಾಹ್ಯಾಕಾಶ ಯಾನವನ್ನ ಕುರಿತು ಮಮತಾ ಮಾತಾಡಿದ್ದಾರೆ. ಈ ವೇಳೆ ಇಂದಿರಾ ಗಾಂಧಿಯವರು ಚಂದ್ರನನ್ನ ತಲುಪಿದ್ದ ಟೈಮ್‌ನಲ್ಲಿ ಅಲ್ಲಿಂದ ಭಾರತ ಹೇಗೆ ಕಾಣುತ್ತೆ ಎಂದು ರಾಕೇಶ್‌ ಶರ್ಮಾರನ್ನ ಕೇಳಿದ್ದರು. ಆಗ ರಾಕೇಶ್‌ ಅವ್ರು ‘ಸಾರೆ ಜಹಾನ್ ಸೆ ಅಚ್ಚಾ’ ಅಂತ ಉತ್ತರಿಸಿದರು ಎಂದಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ವ್ಯಂಗ್ಯ ಮಾಡಲಾಗ್ತಿದೆ. ಅಂದ್ಹಾಗೆ ಮೊನ್ನಯಷ್ಟೆ ದೇಶದ ಮೊದಲ ಗಗನಯಾನಿ ರಾಕೇಶ್‌ ಶರ್ಮಾ ಅವರ ಹೆಸರ ಬದಲಿಗೆ ಚಲನಚಿತ್ರ ನಿರ್ಮಾಪಕ ರಾಕೇಶ್‌ ರೋಷನ್‌ ಅಂತ ಉಲ್ಲೇಖಿಸಿ ಟೀಕೆಗೆ ಒಳಗಾಗಿದ್ದರು.

-masthmagaa.com

Contact Us for Advertisement

Leave a Reply