masthmagaa.com:
ದೇಶದಲ್ಲಿ ಎದ್ದಿರೋ ಮಸೀದಿ-ಮಂದಿರ ವಿವಾದಕ್ಕೆ ಬಿಜೆಪಿ ಹಾಗೂ ಅದರ ಹಿಂದಿರೋ RSS ಕಾರಣ ಅಂತಾ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳು ಆರೋಪಿಸ್ತಾನೇ ಬಂದಿವೆ. ಆದ್ರೆ ಈ ಸಮಯದಲ್ಲಿ RSS ಮುಖ್ಯಸ್ಥ ಮೋಹನ್ ಭಾಗವತ್ ತುಂಬಾ ಇಂಪಾರ್ಟೆಟ್ ಮತ್ತು ತುಂಬಾ ಇಂಟರೆಸ್ಟಿಂಗ್ ಹೇಳಿಕೆ ಕೊಟ್ಟಿದ್ದಾರೆ. ದೇಶದ ಪ್ರತಿ ಮಸೀದಿಗಳಲ್ಲಿ ಯಾಕೆ ಶಿವಲಿಂಗವನ್ನ ಹುಡುಕ್ತಿದ್ದೀರಾ ಅಂತ ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿರೋ ಅವ್ರು ʻಗ್ಯಾನ್ವ್ಯಾಪಿ ಮಸೀದಿ ವಿಷಯ ಚರ್ಚೆ ಆಗ್ತಿದೆ. ಅವು ನಮ್ಮ ಆರಾಧನ ಸ್ಥಳ ಆಗಿರಬಹುದು. ಇತಿಹಾಸವನ್ನ ಚೇಂಜ್ ಮಾಡೋಕೆ ಆಗಲ್ಲ. ಆ ಇತಿಹಾಸವನ್ನ ಈಗಿರೋ ಹಿಂದೂಗಳು ಮಾಡಿದ್ದಲ್ಲ, ಆ ಕಡೆ ಮುಸ್ಲಿಮರು ಮಾಡಿರೋದಲ್ಲ. ಇತಿಹಾಸ, ಇತಿಹಾಸನೇ… ಎರಡು ಗುಂಪುಗಳು ಈ ರೀತಿ ಬರುವ ಸಮಸ್ಯೆಗಳನ್ನ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಗ್ಯಾನ್ವ್ಯಾಪಿ ವಿಚಾರ ಸದ್ಯ ಕೋರ್ಟ್ನಲ್ಲಿದೆ, ಯಾವುದೇ ಆದೇಶ ಬಂದ್ರೂ ಇಬ್ಬರೂ ಶಾಂತಿಯಿಂದ ಒಪ್ಪಿಕೊಳ್ಳಬೇಕು. ಹಂಗಂತ ಎಲ್ಲಾ ಮಸೀದಿಗಳಲ್ಲೂ ಯಾಕೆ ಶಿವಲಿಂಗ ಹುಡುಕ್ತಿದ್ದೀರಾ ಅಂತ ಹೇಳಿದ್ದಾರೆ. ಜೊತೆಗೆ ಗ್ಯಾನ್ ವ್ಯಾಪಿ ವಿಚಾರವನ್ನ ದೊಡ್ಡ ವಿವಾದವನ್ನಾಗಿ ಸೃಷ್ಠಿ ಮಾಡೋದು ತಪ್ಪು. ಯಾವುದೇ ಹಿಂದೂವಾಗಲೀ ಮುಸ್ಲಿಮರನ್ನ ವಿರೋಧ ಮಾಡಬೇಕಿಲ್ಲ. ಇತಿಹಾಸದಲ್ಲಿ ಮುಸ್ಲಿಮರು ನಮ್ಮ ಮೇಲೆ ನಮ್ಮ ದೇವಸ್ಥಾನಗಳ ಮೇಲೆ ದಾಳಿ ಮಾಡಿದ್ರು. ಆದ್ರೆ ಅದಕ್ಕೆ ಈಗಿರೋ ಮುಸ್ಲಿಮರನ್ನ ಹೊಣೆಯನ್ನಾಗಿಸಬೇಕಿಲ್ಲ. ಅವರು ಹೊರಗಿನವರಲ್ಲ.ಕೆಲ ರಾಷ್ಟ್ರೀಯವಾದಿ ಮುಸಲ್ಮಾನರು ಸ್ವಾತಂತ್ರ ಚಳುವಳಿಯಲ್ಲಿಯೂ ಹೋರಾಟ ಮಾಡಿದ್ದಾರೆ ಅಂತ ಹೇಳಿದ್ದಾರೆ. ದೇಶದಲ್ಲಿ ಊರಿಗೊಂದು ಮಂದಿರ-ಮಸೀದಿ ವಿವಾದ ಭುಗಿಲೇಳ್ತಾ ಇರೋ ಬೆನ್ನಲ್ಲೇ ಮೋಹನ್ ಭಾಗವತ್ ಅವ್ರ ಹೇಳಿಕೆ ಮಹತ್ವದ್ದಾಗಿದೆ.
-masthmagaa.com
Contact Us for Advertisement