masthmagaa.com:
ಯಡಿಯೂರಪ್ಪ ಅವರ ಹುಟ್ಟು ಹಬ್ಬದ ಬಗ್ಗೆ ಮಾತನಾಡಿದ ಬಿಎಸ್ವೈ ಪುತ್ರಿ ಅರುಣಾ ದೇವಿ ʻನಮ್ಮ ತಂದೆಯ ಖುರ್ಚಿ ಅಲ್ಲಾಡಿಸೋಕೆ ಅನೇಕ ಕೃತ್ಯಗಳನ್ನ ಮಾಡಲಾಗಿತ್ತು. ಜೈಲಿನಲ್ಲಿದ್ದಾಗ ಪ್ರತಿಯೊಂದು ಘಟನೆಯನ್ನ ಡೈರಿಯಲ್ಲಿ ಬರೆದಿದ್ದಾರೆ. ಸಂದರ್ಭ ಬಂದಾಗ ಅದು ಹೊರ ಬರುತ್ತೆ ಅಂತ ಹೇಳಿದ್ದಾರೆ. ಜೊತೆಗೆ ಹೊನ್ನಳ್ಳಿಯಲ್ಲಿ 1ಎಕರೆ ಜಾಗ ತೆಗದುಕೊಂಡು ಗದ್ದೆ ಮಾಡಿದ್ರು. ನೋವನ್ನ ಮರೆಯೋಕೆ ಕೃಷಿಯನ್ನ ಮಾಡಿದ್ರು. ಶಿವರಾತ್ರಿ ದಿನ ಯಡಿಯೂರಪ್ಪ ಅವರ ಪತ್ನಿ ಅಂದ್ರೆ ನಮ್ಮ ತಾಯಿಯನ್ನ ನೆನೆದು ಭಾವುಕರಾಗಿದ್ರು ಅಂತ ಹೇಳಿದ್ದಾರೆ. ಇನ್ನು ಯಡಿಯೂರಪ್ಪ ಅವರ ಡೈರಿ ಕುರಿತ ಪ್ರಕರಣಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ಕೊಟ್ಟಿದೆ. ಯಡಿಯೂರಪ್ಪ ಅವರೇ, ಯಾವುದು ಈ ಹೊಸ ಡೈರಿ ಕಥೆ? ನಿಮ್ಮ ಮೇಲೆ ಮಸಲತ್ತು ಮಾಡಿ ನಿಮ್ಮನ್ನು ಜೈಲು ಹಕ್ಕಿ ಮಾಡಿದವರು ಯಾರು? ಅಂತ ಪ್ರಶ್ನೆ ಮಾಡಿದೆ.
-masthmagaa.com
Contact Us for Advertisement