masthmagaa.com:
ನಿನ್ನೆ ಪಂಜಾಬ್ನ ಲೂದಿಯಾನಾದ ಕೋರ್ಟ್ನಲ್ಲಿ ನಡೆದ ಸ್ಫೋಟದ ಹಿಂದೆ ಯಾರ ಕೈ ಇದೆ.. ಯಾಕಾಗಿ ಸ್ಫೋಟ ನಡೆಸಲಾಗಿದೆ ಅಂತ ಇನ್ನೂ ಕೂಡ ತಿಳಿದು ಬಂದಿಲ್ಲ. ಹೀಗಾಗಿ ಪಂಜಾಬ್ ಸರ್ಕಾರ ಈಗ ಕೇಂದ್ರ ಸರ್ಕಾರದ ಮೊರೆ ಹೋಗಿದೆ. ಗೃಹಸಚಿವ ಅಮಿತ್ ಶಾಗೆ ಕರೆ ಮಾಡಿರೋ ಸಿಎಂ ಚರಣ್ಜೀತ್ ಸಿಂಗ್ ಚನ್ನಿ, ತನಿಖೆಗೆ ನೆರವು ಕೇಳಿದ್ದಾರೆ. ಅದ್ರ ಬೆನ್ನಲ್ಲೇ ಕೇಂದ್ರ ಸರ್ಕಾರ ಪಂಜಾಬ್ಗೆ ತನಿಖಾ ತಂಡ ಕಳುಹಿಸಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಚರಣ್ಜೀತ್, ಮಾಜಿ ಸಚಿವ ಬಿಕ್ರಂ ಮಜೀತಿಯಾ ಹೆಸರು ಕೇಳಿ ಬಂದಿರೋ ಮಾದಕ ವಸ್ತು ಪ್ರಕರಣದ ವಿಚಾರಣೆ ದಿನವೇ ಈ ಘಟನೆ ನಡೆದಿದೆ. ಸೋ ಲಿಂಕ್ ಇದ್ರೂ ಇರಬಹುದು ಅಂತ ಹೇಳಿದ್ದಾರೆ. ಇನ್ನು ಘಟನೆ ಬಗ್ಗೆ ಮಾತಾಡಿರೋ ಲೂದಿಯಾನಾ ಪೊಲೀಸರು, ಪ್ರಾಥಮಿಕ ತನಿಖೆಯಲ್ಲಿ ಘಟನೆಯಲ್ಲಿ ಪ್ರಾಣ ಬಿಟ್ಟ ವ್ಯಕ್ತಿಯೇ ಸ್ಫೋಟಕ್ಕೆ ಕಾರಣವಾಗಿರಬಹುದು.. ಈ ಬಗ್ಗೆ ಸ್ಫೋಟಕ ಎಕ್ಸ್ಪರ್ಟ್ಗಳು ತನಿಖೆ ನಡೆಸ್ತಿದ್ದಾರೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement