masthmagaa.com:
ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭಾರಿ ಸರಣಿ ಸ್ಫೋಟ ಸಂಭವಿಸಿದ್ದು ಓರ್ವ ಸಾವನ್ನಪ್ಪಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 10 ಜನರ ಸ್ಥಿತಿ ಗಂಭೀರವಾಗಿದೆ ಅಂತ ತಿಳಿದು ಬಂದಿದೆ. ಕನ್ವೆನ್ಷನ್ ಸೆಂಟರ್ ಒಂದರಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಕೊಚ್ಚಿ ಬಳಿಯ ಕಲಮಸ್ಸೆರಿಯಲ್ಲಿ ಭಾನುವಾರದ ಕ್ರಿಶ್ಚಿಯನ್ ಧರ್ಮ ಪ್ರಾರ್ಥನಾ ಸಭೆ ವೇಳೆ ಸಾವಿರಾರು ಜನ ನೆರೆದಿದ್ದರು. ಈ ವೇಳೆ ಬರೋಬ್ಬರಿ 3 ಸ್ಪೋಟಗಳು ಸಂಭವಿಸಿವೆ. ಘಟನೆ ನಂತರ ಸ್ಥಳದಲ್ಲಿದ್ದ ಜನರು ಚೆಲ್ಲಾಪಿಲ್ಲಿಯಾಗಿದ್ದು, ಭವನದ ಒಳಗಿದ್ದ ಚೇರ್ಗಳು ಹೊತ್ತಿ ಉರಿದಿವೆ. ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಆದ್ರೆ ಪ್ರಾಥಮಿಕ ತನಿಖೆಯಲ್ಲಿ ಉಗ್ರರ ಕರಿನೆರಳು ಇರೋ ಶಂಕೆ ವ್ಯಕ್ತವಾಗಿದೆ ಅಂತ ಪೊಲೀಸರು ಹೇಳಿದ್ದಾರೆ. ಇನ್ನು ಇವತ್ತು ಅಂದ್ರೆ ಭಾನುವಾರ ಈ ಭಾಗದಲ್ಲಿ ರಜೆಯಲ್ಲಿದ್ದ ವೈದ್ಯರು ಸೇರಿ ಎಲ್ಲ ಆರೋಗ್ಯ ಕಾರ್ಯಕರ್ತರೂ ಕೂಡಲೇ ಸೇವೆಗೆ ಹಿಂತಿರುಗುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆ ನೀಡಿದ್ದಾರೆ.
-masthmagaa.com
Contact Us for Advertisement