11ನೇ ಸುತ್ತಿನ ಮಾತುಕತೆಯೂ ವಿಫಲ: ನಾಳೆ ಒಳಗೆ ನಿರ್ಧಾರ ತಿಳಿಸಲು ಸೂಚನೆ

masthmagaa.com:

ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆ ಮುಖಂಡರ ಜೊತೆ ಇವತ್ತು ನಡೆದ 11ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಮಾತುಕತೆ ಬಳಿಕ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ‘ರೈತ ಸಂಘಟನೆಗಳ ಮಾತುಕತೆಯ ಉದ್ದೇಶ ರೈತರ ಕಲ್ಯಾಣ ಕುರಿತು ಆಗಿರಲಿಲ್ಲ. ಹೀಗಾಗಿ ಸಭೆ ವಿಫಲವಾಯ್ತು. ಈ ಬಗ್ಗೆ ನನಗೆ ಬೇಸರವಾಗಿದೆ. ಕೃಷಿ ಕಾನೂನುಗಳಲ್ಲಿ ಏನನ್ನ ಬದಲಾವಣೆ ಮಾಡಬೇಕು ಅಂತ ನಾವು ಕೇಳಿದ್ರೂ ರೈತ ಸಂಘಟನೆಗಳು ಕಾನೂನುಗಳನ್ನ ವಾಪಸ್​ ಪಡೀಬೇಕು ಅನ್ನೋ ಒಂದೇ ಬೇಡಿಕೆ ಮುಂದಿಟ್ಟರು’ ಅಂತ ಹೇಳಿದ್ದಾರೆ.

ನಮ್ಮ ಪ್ರಸ್ತಾವನೆಯು ರೈತರು ಮತ್ತು ದೇಶದ ಪರವಾಗಿದೆ. ಹೀಗಾಗಿ ಅದರ ಬಗ್ಗೆ ಮತ್ತೊಮ್ಮೆ ಯೋಚನೆ ಮಾಡುವಂತೆ ಹೇಳಿದ್ದೇವೆ. ತಮ್ಮ ನಿರ್ಧಾರವನ್ನ ನಾಳೆಯೊಳಗೆ ತಿಳಿಸುವಂತೆಯೂ ರೈತ ಸಂಘಟನೆಗಳಿಗೆ ಸೂಚಿಸಿದ್ದೇವೆ. ಕೆಲವೊಬ್ಬರು ಪ್ರತಿಭಟನೆ ಮುಂದುವರಿಸುವ ಉದ್ದೇಶ ಹೊಂದಿದ್ದಾರೆ. ಅದರಿಂದ ಏನೂ ಒಳ್ಳೇದಾಗಲ್ಲ ಅನ್ನೋದು ಅವರಿಗೂ ಗೊತ್ತು ಅಂತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply