ಯುಪಿಯಲ್ಲಿ ಯೋಗಿ ಅಂತ ಹೆಸರಿಟ್ಕೊಂಡು ಲಕ್ಷ ಲಕ್ಷ ದೋಚಿದ ಖದೀಮರು!

masthmagaa.com:

ಉತ್ತರಪ್ರದೇಶದಲ್ಲಿ ಯೋಗಿ ಹಾರ್ಶ್‌ ಹಾಗೂ ಯೋಗಿ ಕೇದಾರ್‌ ನಾಥ್‌ ಅನ್ನೋ ಇಬ್ರು ಸ್ನೇಹಿತರು ಸೇರ್ಕೊಂಡು ʻಯೋಗಿ ಕಾರ್ಪೋರೇಶನ್‌ ಆಫ್‌ ಇಂಡಿಯಾʼ ಅನ್ನೊ ಸಂಸ್ಥೆಯನ್ನ ಸರ್ಕಾರಿ ಪೋರ್ಟಲ್‌ನಲ್ಲಿ ರಿಜಿಸ್ಟರ್‌ ಮಾಡ್ಸಿದ್ದಾರೆ. ಈ ಇಬ್ರು ಕಾವಿ ತೊಟ್ಟು ಕೂಲಿಂಗ್‌ ಗ್ಲಾಸ್‌ ಹಾಕಿ ಜನರಿಗೆ ಟೋಪಿ ಹಾಕಿದ್ದಾರೆ. ಅಸಲಿಗೆ ಇದು ಅವರ ನಿಜವಾದ ಹೆಸರೇ ಅಲ್ಲ. ಹಾರ್ಶ್‌ ಚೌಹಾನ್‌ ಹಾಗೂ ಕೇದಾರ್‌ನಾಥ್‌ ಅನ್ನೋ ಈ ಖದೀಮರು ಯೋಗಿ ಹೆಸರೇಳ್ಕೊಂಡು ಜನರಿಂದ ಲಕ್ಷ ಲಕ್ಷ ಹಣ ಕಬಳಿಸಿದ್ದಾರೆ. ಅದ್ರಲ್ಲೊಬ್ಬ ಮುಂದಿನ ಯುಪಿ ಸಿಎಂ ನಾನೆ ಅಂತೇಳ್ಕೊಂಡು ತಿರುಗಾಡಿದ್ದಾನೆ. ತಮ್ಮ ಈ ಯೋಗಿ ಕಾರ್ಪೋರೇಶನ್‌ ಮೂಲಕ ಸರ್ಕಾರಿ ಕೆಲಸಗಳನ್ನ ಈಸಿಯಾಗಿ ಮಾಡಿಸಿಕೊಡ್ತೀವಿ ಅಂತೇಳಿ ಹಣ ವಸೂಲಿ ಮಾಡಿದ್ದಾರೆ. ಈ ಕಂಪನಿಯನ್ನ ಸಿಎಂ ಆದಿತ್ಯನಾಥ್‌ ಸೂಪ್ರುವೈಸ್‌ ಮಾಡ್ತಿದ್ದಾರೆ. ನಾವು ನಿಮ್ಮನ್ನ ನಮ್ಮ ಕಂಪನಿಯ ಪ್ರಾದೇಶಿಕ ಅಧಿಕಾರಿ ಮಾಡ್ತೀವಿ ಅಂತೇಳಿ ಕಿವಿಗೆ ಹೂ ಇಟ್ಟಿದ್ದಾರೆ. ಹಲವಾರು ಬಿಜೆಪಿ ಪದಾಧಿಕಾರಿಗಳೇ ಇವರ ಬಲೆಗೆ ಬಿದ್ದಿದ್ದಾರೆ. ಈಗೆ ಮಾಡ್ತಾನೆ ಕೊನೆಗೆ ಬಿಜೆಪಿ ಮಂಡಲ್‌ ಸೆಕ್ರೆಟರಿ ಒಬ್ರ ಕೈಗೆ ತಗಲಾಕೊಂಡಿದಾರೆ. ನಂತರ ಘೋರಖ್‌ಪುರ್‌ ಕಂಠ್‌ ಪೊಲೀಸ್‌ ಠಾಣೆಯಲ್ಲಿ ಇವರ ಮೇಲೆ ಎಂಟತ್ತು ಸೆಕ್ಶನ್‌ಗಳ ಅಡಿಯಲ್ಲಿ ಕೇಸ್‌ ದಾಖಲಾಗಿದೆ. ಆರೋಪಿಗಳಿಂದ ಬೇನಾಮಿ ಕಂಪನಿಯ ID ಕಾರ್ಡ್‌ಗಳು, ಸಿಎಂ ಆದಿತ್ಯನಾಥ್‌ರ ಫೋಟೋಗಳು, ಕೇಂದ್ರ ಸರ್ಕಾರದಲ್ಲಿ ರಿಜಿಸ್ಟರ್‌ ಆಗಿರೋ ಅಫಿಶಿಯಲ್‌ ರಿಜಿಸ್ಟರ್ಡ್ ನಂಬರನ್ನ ವಶಪಡಿಸಿಕೊಳ್ಳಲಾಗಿದೆ.

-masthmagaa.com

Contact Us for Advertisement

Leave a Reply