masthmagaa.com:
ನಿನ್ನೆ ಒಂದೇ ದಿನ 48 ಪ್ರಕರಣ ದೃಢಪಟ್ಟಿದ್ದ ನಮ್ಮ ರಾಜ್ಯದಲ್ಲಿ ಇವತ್ತು ಮತ್ತೆ 41 ಜನರಲ್ಲಿ ಹೊಸದಾಗಿ ಕಾಯಿಲೆ ಕಾಣಿಸಿಕೊಂಡಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ.
41 ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರ ಒಂದರಲ್ಲೇ 12 ಪ್ರಕರಣಗಳು ದೃಢಪಟ್ಟಿವೆ.
ಉತ್ತರ ಕನ್ನಡದ ಭಟ್ಕಳದಲ್ಲಿ 8 ಪ್ರಕರಣಗಳು ದೃಢಪಟ್ಟಿವೆ.
ದಾವಣಗೆರೆಯಲ್ಲಿ ಮತ್ತೆ 6 ಪ್ರಕರಣಗಳು ದೃಢಪಟ್ಟಿವೆ.
ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ.
ಚಿತ್ರದುರ್ಗದಲ್ಲೂ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಎಲ್ಲರೂ ಗುಜರಾತ್ನ ಅಹಮದಾಬಾದ್ಗೆ ಪ್ರಯಾಣ ಮಾಡಿದವರಾಗಿದ್ದಾರೆ.
ತುಮಕೂರಲ್ಲಿ ನಾಲ್ವರಿಗೆ ಹೊಸದಾಗಿ ಸೋಂಕು ತಗುಲಿದೆ. ಇದರಲ್ಲಿ ಮೂವರು ಗುಜರಾತ್ ಲಿಂಕ್ ಹೊಂದಿದ್ರೆ, ಒಬ್ಬರು ಬೆಂಗಳೂರಿನ ಪಾದರಾಯನಪುರ ಲಿಂಕ್ ಹೊಂದಿದ್ದಾರೆ.
ಉಳಿದಂತೆ ಬೀದರ್ನಲ್ಲಿ 3, ವಿಜಯಪುರ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.
ರಾಜ್ಯದಲ್ಲಿ ಇದುವರೆಗೆ 30 ಮಂದಿ ಪ್ರಾಣ ಕಳೆದುಕೊಂಡಿದ್ದು, 386 ಮಂದಿ ಗುಣಮುಖರಾಗಿದ್ದಾರೆ. ಸದ್ಯ 377 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಅದರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ.
-masthmagaa.com
Contact Us for Advertisement