ರಾಜ್ಯದಲ್ಲಿ ನಿನ್ನೆ 48, ಇವತ್ತು 41 ಕೊರೋನಾ ಕೇಸ್ ಪತ್ತೆ..!

masthmagaa.com:

ನಿನ್ನೆ ಒಂದೇ ದಿನ 48 ಪ್ರಕರಣ ದೃಢಪಟ್ಟಿದ್ದ ನಮ್ಮ ರಾಜ್ಯದಲ್ಲಿ ಇವತ್ತು ಮತ್ತೆ 41 ಜನರಲ್ಲಿ ಹೊಸದಾಗಿ ಕಾಯಿಲೆ ಕಾಣಿಸಿಕೊಂಡಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 794ಕ್ಕೆ ಏರಿಕೆಯಾಗಿದೆ.

41 ಹೊಸ ಪ್ರಕರಣಗಳ ಪೈಕಿ ಬೆಂಗಳೂರು ನಗರ ಒಂದರಲ್ಲೇ 12 ಪ್ರಕರಣಗಳು ದೃಢಪಟ್ಟಿವೆ.

ಉತ್ತರ ಕನ್ನಡದ ಭಟ್ಕಳದಲ್ಲಿ 8 ಪ್ರಕರಣಗಳು ದೃಢಪಟ್ಟಿವೆ.

ದಾವಣಗೆರೆಯಲ್ಲಿ ಮತ್ತೆ 6 ಪ್ರಕರಣಗಳು ದೃಢಪಟ್ಟಿವೆ.

ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ.

ಚಿತ್ರದುರ್ಗದಲ್ಲೂ ಮೂವರಲ್ಲಿ ಸೋಂಕು ಪತ್ತೆಯಾಗಿದೆ. ಎಲ್ಲರೂ ಗುಜರಾತ್​ನ ಅಹಮದಾಬಾದ್​ಗೆ ಪ್ರಯಾಣ ಮಾಡಿದವರಾಗಿದ್ದಾರೆ.

ತುಮಕೂರಲ್ಲಿ ನಾಲ್ವರಿಗೆ ಹೊಸದಾಗಿ ಸೋಂಕು ತಗುಲಿದೆ. ಇದರಲ್ಲಿ ಮೂವರು ಗುಜರಾತ್​ ಲಿಂಕ್ ಹೊಂದಿದ್ರೆ, ಒಬ್ಬರು ಬೆಂಗಳೂರಿನ ಪಾದರಾಯನಪುರ ಲಿಂಕ್ ಹೊಂದಿದ್ದಾರೆ.

ಉಳಿದಂತೆ ಬೀದರ್​ನಲ್ಲಿ 3, ವಿಜಯಪುರ ಹಾಗೂ ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ರಾಜ್ಯದಲ್ಲಿ ಇದುವರೆಗೆ 30 ಮಂದಿ ಪ್ರಾಣ ಕಳೆದುಕೊಂಡಿದ್ದು, 386 ಮಂದಿ ಗುಣಮುಖರಾಗಿದ್ದಾರೆ. ಸದ್ಯ 377 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಅದರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply