masthmagaa.com:
ಸಿಲಿಕಾನ್ ಸಿಟಿ ಅಂತಾನೇ ಕರೆಸಿಕೊಳ್ಳೋ ಬೆಂಗಳೂರಿನಲ್ಲಿ ಒಂದು ವಾರದ ಹಿಂದೆ 200 ಕೊರೋನಾ ಕೇಸ್ ಬರ್ತಿತ್ತು. ಇವತ್ತು ಬೆಂಗಳೂರಿನ ನಂಬರ್ಸ್ 400ರ ಗಡಿ ದಾಟಿ ಹೋಗಿದೆ. ಇಡೀ ರಾಜ್ಯದ ಕೊರೋನಾ ಕೇಸಸ್ 500 ದಾಟಿ ಹೋಗಿದೆ. ಇದರ ನಡುವೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕಾಫಿ ತೋಟದ 23 ಕಾರ್ಮಿಕರಿಗೆ ಕೊರೋನಾ ಅಟಕಾಯಿಸಿಕೊಂಡಿದೆ. ವಾರದ ಹಿಂದೆ ಇಲ್ಲಿನ ಇಬ್ಬರು ಕಾರ್ಮಿಕರು ಪಶ್ಚಿಮ ಬಂಗಾಳಕ್ಕೆ ಹೋಗಿ ಬಂದಿದ್ದರು. ಈಗ ಅವರಿಬ್ಬರು ಸೇರಿ ಒಟ್ಟು 23 ಜನರಿಗೆ ಸೋಂಕು ದೃಢಪಟ್ಟಿದೆ. ಅತ್ತ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10 ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಇನ್ನು ಡಿಸೆಂಬರ್ 30ರಿಂದ ಎರಡು ದಿನ ಪ್ರಸಿದ್ಧ ಪ್ರವಾಸಿ ತಾಣ ನಂದಿ ಹಿಲ್ಸ್ ಪ್ರವಾಸಿಗರಿಗೆ ಬಂದ್ ಆಗಿರುತ್ತೆ ಅಂತ ಪ್ರಕಟಣೆ ಹೊರಡಿಸಲಾಗಿದೆ.
-masthmagaa.com
Contact Us for Advertisement