masthmagaa.com:
ಜಾಗತಿಕ ಪಿಡುಗಾಗಿರುವ ಕೊರೋನಾ ವೈರಸ್ ಇದೀಗ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೂ ಕಾಲಿಟ್ಟಿದೆ. ಶಿವಮೊಗ್ಗದಲ್ಲಿ 8 ಜನರಿಗೆ ಕಾಯಿಲೆ ದೃಢಪಟ್ಟಿದೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇವರೆಲ್ಲರೂ ಇತ್ತೀಚೆಗಷ್ಟೇ ಗುಜರಾತ್ನ ಅಹಮದಾಬಾದ್ನಿಂದ ಬಂದಿದ್ದರು. ಇದರಲ್ಲಿ 7 ಮಂದಿ ಶಿಕಾರಿಪುರ ಹಾಗೂ ಒಬ್ಬರು ತೀರ್ಥಹಳ್ಳಿ ತಾಲೂಕಿನವರಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕು ದೃಢಪಟ್ಟ ರಾಜ್ಯದ 22ನೇ ಜಿಲ್ಲೆಯಾಗಿದೆ ಶಿವಮೊಗ್ಗ.
ಇದುವರೆಗೆ ಒಂದೇ ಒಂದು ಪ್ರಕರಣ ಕಾಣಿಕೊಳ್ಳದ ಶಿವಮೊಗ್ಗ ಜಿಲ್ಲೆ ರಾಜ್ಯದ ಜೋನ್ವಾರು ಪಟ್ಟಿಯಲ್ಲಿ ವೈಟ್ ಜೋನ್ನಲ್ಲಿತ್ತು. ಆದ್ರೀಗ 8 ಕೇಸ್ಗಳೊಂದಿಗೆ ಆರೆಂಜ್ ಜೋನ್ಗೆ ಹೋಗಿದೆ. ಆದ್ರೆ ಕೇಂದ್ರದ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆ ಇನ್ನೂ ಗ್ರೀನ್ ಜೋನ್ನಲ್ಲೇ ಇದೆ. ಜಿಲ್ಲಾವಾರು ಜೋನ್ಗಳನ್ನು ನಿರ್ಧರಿಸುವಾಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಬೇರೆ ಬೇರೆ ಮಾನದಂಡಗಳನ್ನು ಅನುಸರಿಸುತ್ತಿವೆ.
-masthmagaa.com
Contact Us for Advertisement