ಶಿವಮೊಗ್ಗಕ್ಕೂ ಕಾಲಿಟ್ಟ ಕೊರೋನಾ.. ಆರೆಂಜ್​ ಜೋನ್​ಗೆ ಮಲೆನಾಡ ಹೆಬ್ಬಾಗಿಲು..!

masthmagaa.com:

ಜಾಗತಿಕ ಪಿಡುಗಾಗಿರುವ ಕೊರೋನಾ ವೈರಸ್ ಇದೀಗ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೂ ಕಾಲಿಟ್ಟಿದೆ. ಶಿವಮೊಗ್ಗದಲ್ಲಿ 8 ಜನರಿಗೆ ಕಾಯಿಲೆ ದೃಢಪಟ್ಟಿದೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇವರೆಲ್ಲರೂ ಇತ್ತೀಚೆಗಷ್ಟೇ ಗುಜರಾತ್​ನ ಅಹಮದಾಬಾದ್​ನಿಂದ ಬಂದಿದ್ದರು. ಇದರಲ್ಲಿ 7 ಮಂದಿ ಶಿಕಾರಿಪುರ ಹಾಗೂ ಒಬ್ಬರು ತೀರ್ಥಹಳ್ಳಿ ತಾಲೂಕಿನವರಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕು ದೃಢಪಟ್ಟ ರಾಜ್ಯದ 22ನೇ ಜಿಲ್ಲೆಯಾಗಿದೆ ಶಿವಮೊಗ್ಗ.

ಇದುವರೆಗೆ ಒಂದೇ ಒಂದು ಪ್ರಕರಣ ಕಾಣಿಕೊಳ್ಳದ ಶಿವಮೊಗ್ಗ ಜಿಲ್ಲೆ ರಾಜ್ಯದ ಜೋನ್​ವಾರು ಪಟ್ಟಿಯಲ್ಲಿ ವೈಟ್​ ಜೋನ್​ನಲ್ಲಿತ್ತು. ಆದ್ರೀಗ 8 ಕೇಸ್​ಗಳೊಂದಿಗೆ ಆರೆಂಜ್​​ ಜೋನ್​ಗೆ ಹೋಗಿದೆ. ಆದ್ರೆ ಕೇಂದ್ರದ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆ ಇನ್ನೂ ಗ್ರೀನ್​ ಜೋನ್​ನಲ್ಲೇ ಇದೆ. ಜಿಲ್ಲಾವಾರು ಜೋನ್​ಗಳನ್ನು ನಿರ್ಧರಿಸುವಾಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಬೇರೆ ಬೇರೆ ಮಾನದಂಡಗಳನ್ನು ಅನುಸರಿಸುತ್ತಿವೆ.

-masthmagaa.com

Contact Us for Advertisement

Leave a Reply