masthmagaa.com:
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂದಿನ ವಾರ ಭಾರಿ ಮಹತ್ವ ಪಡೆದುಕೊಂಡಿದೆ. ಯಾಕಂದ್ರೆ ಸುಶಾಂತ್ ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿರುವ ಏಮ್ಸ್ ವೈದ್ಯರ ತಂಡ ಮುಂದಿನ ವಾರ ಸಿಬಿಐಗೆ ತನ್ನ ವರದಿಯನ್ನು ನೀಡಲಿದೆ. ಇದರೊಂದಿಗೆ ಸುಶಾಂತ್ದು ಆತ್ಮಹತ್ಯೆಯೋ, ಕೊಲೆಯೋ ಎಂಬ ಬಗ್ಗೆ ಸಿಬಿಐಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿರುವ ಏಮ್ಸ್ ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಪ್ರೊ. ಡಾ. ಸುಧೀರ್ ಗುಪ್ತಾ, ‘ನಮ್ಮ ಅಭಿಪ್ರಾಯವನ್ನು ಮುಂದಿನ ವಾರ ಸಿಬಿಐಗೆ ನೀಡಲಿದ್ದೇವೆ. ಪ್ರಕರಣದಲ್ಲಿ ಈ ವರದಿ ನಿರ್ಣಾಯಕವಾಗುತ್ತದೆ. ಸಿಬಿಐ ಅಧಿಕಾರಿಗಳಿಗೆ ನಮ್ಮ ವರದಿ ಬಗ್ಗೆ ಯಾವುದೇ ಅನುಮಾನ ಇರಲ್ಲ ಅಂತ ನಾವು ಭಾವಿಸಿದ್ದೇವೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ವರದಿಯಲ್ಲಿ ಏನಿದೆ ಅನ್ನೋದನ್ನು ಈಗಲೇ ಹಂಚಿಕೊಳ್ಳಲು ಸಾಧ್ಯವಿಲ್ಲ’ ಅಂತ ಹೇಳಿದ್ದಾರೆ.
ಅಂದ್ಹಾಗೆ ಜೂನ್ 14ರಂದು ಮೃತಪಟ್ಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಆದ್ರೆ ಈ ಪ್ರಕರಣದಲ್ಲಿ ಕೂಪರ್ ಆಸ್ಪತ್ರೆ ಮತ್ತು ಮುಂಬೈ ಪೊಲೀಸರ ಮೇಲೆಯೇ ಸಾಕಷ್ಟು ಅನುಮಾನ ಮೂಡಿತ್ತು. ಹೀಗಾಗಿ ತನಿಖೆಗೆ ಇಳಿದ ಸಿಬಿಐ ತಂಡ ಏಮ್ಸ್ ವೈದ್ಯರ ಸಹಾಯ ಕೇಳಿತ್ತು. ಏಮ್ಸ್ ವೈದ್ಯರು ಮರಣೋತ್ತರ ವರದಿಯನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಿದ್ದಾರೆ. ಮುಂದಿನ ವಾರ ಈ ವರದಿ ಸಿಬಿಐ ಕೈ ಸೇರಲಿದೆ.
-masthmagaa.com
Contact Us for Advertisement