masthmagaa.com:
ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳೇ ರಾಜ್ಯಪಾಲರ ವಿರುದ್ಧ ಪ್ರತಿಭಟನೆಗೆ ಕೂತ್ರೆ ಹೇಗಿರುತ್ತೆ..? ಪುದುಚೆರಿಯಲ್ಲಿ ಈಗ ಹಾಗೇ ಆಗಿದೆ. ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ವಿರುದ್ಧ ಅಲ್ಲಿನ ಸಿಎಂ ವಿ. ನಾರಾಯಣಸಾಮಿ ಧರಣಿ ಮಾಡಿದ್ದಾರೆ. ಇದಕ್ಕೆ ಕಾರಣ, ಚುನಾಯಿತ ಸರ್ಕಾರ ಕೆಲಸ ಮಾಡಲು ಕಿರಣ್ ಬೇಡಿ ಬಿಡ್ತಿಲ್ಲ. ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಿದ್ದಾರೆ ಅನ್ನೋದು. ಹೀಗಾಗಿ ಕಿರಣ್ ಬೇಡಿ ಅವರನ್ನ ವಾಪಸ್ ಕರೆಸಿಕೊಳ್ಳಿ ಅಂತ ಕೇಂದ್ರ ಸರ್ಕಾರಕ್ಕೆ ಪುದುಚೆರಿ ಸಿಎಂ ಆಗ್ರಹಿಸಿದ್ದಾರೆ.
-masthmagaa.com
Contact Us for Advertisement