ರಾಜ್ಯಪಾಲರ ವಿರುದ್ಧವೇ ಧರಣಿ ಕೂತ ಮುಖ್ಯಮಂತ್ರಿ! ಎಲ್ಲಿ, ಯಾಕೆ?

masthmagaa.com:

ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳೇ ರಾಜ್ಯಪಾಲರ ವಿರುದ್ಧ ಪ್ರತಿಭಟನೆಗೆ ಕೂತ್ರೆ ಹೇಗಿರುತ್ತೆ..? ಪುದುಚೆರಿಯಲ್ಲಿ ಈಗ ಹಾಗೇ ಆಗಿದೆ. ಪುದುಚೆರಿಯ ಲೆಫ್ಟಿನೆಂಟ್​ ಗವರ್ನರ್ ಆಗಿರುವ ಕಿರಣ್ ಬೇಡಿ ವಿರುದ್ಧ ಅಲ್ಲಿನ ಸಿಎಂ ವಿ. ನಾರಾಯಣಸಾಮಿ ಧರಣಿ ಮಾಡಿದ್ದಾರೆ. ಇದಕ್ಕೆ ಕಾರಣ, ಚುನಾಯಿತ ಸರ್ಕಾರ ಕೆಲಸ ಮಾಡಲು ಕಿರಣ್ ಬೇಡಿ ಬಿಡ್ತಿಲ್ಲ. ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡ್ತಿದ್ದಾರೆ ಅನ್ನೋದು. ಹೀಗಾಗಿ ಕಿರಣ್​ ಬೇಡಿ ಅವರನ್ನ ವಾಪಸ್ ಕರೆಸಿಕೊಳ್ಳಿ ಅಂತ ಕೇಂದ್ರ ಸರ್ಕಾರಕ್ಕೆ ಪುದುಚೆರಿ ಸಿಎಂ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply