masthmagaa.com:
ಇವತ್ತು ನೇತಾಜಿ ಸುಭಾಷ್ ಚಂದ್ರಬೋಸ್ ಅವರ 125ನೇ ಜನ್ಮದಿನ.. ಹೀಗಾಗಿಯೇ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜನವರಿ 24ರ ಬದಲಾಗಿ 23ರಂದು ಅಂದ್ರೆ ಇವತ್ತು ಗಣರಾಜ್ಯೋತ್ಸವ ಶುರು ಮಾಡಲಾಗಿದೆ. ಇಂಡಿಯಾ ಗೇಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಜೆ 6 ಗಂಟೆಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹಾಲೋಗ್ರಾಂ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಸದ್ಯ ಸುಭಾಷ್ ಚಂದ್ರ ಬೋಸ್ ಅವರ ಗ್ರಾನೈಟ್ ಪ್ರತಿಮೆ ರೆಡಿಯಾಗ್ತಿದ್ದು, ಅಲ್ಲಿಯವರೆಗೆ ಈ ಹಾಲೋಗ್ರಾಂ ಪ್ರತಿಮೆ ಇರಲಿದೆ. ಇದು 90 ಪರ್ಸೆಂಟ್ನಷ್ಟು ಪಾರದರ್ಶಕವಾಗಿರೋ ಹಾಲೋಗ್ರಾಫಿಕ್ ಸ್ಕ್ರೀನ್ ಇದ್ದು, ಪ್ರೇಕ್ಷಕರಿಗೆ ಕಾಣದಂತೆ ವ್ಯವಸ್ಥೆ ಮಾಡಲಾಗಿದೆ. ಇದು 28 ಅಡಿ ಎತ್ತರ ಮತ್ತು 6 ಅಡಿ ಅಗಲವಿದೆ. ಇದೇ ಕಾರ್ಯಕ್ರಮದಲ್ಲಿ 2019, 20, 21 ಮತ್ತು 22ರ ಸಾಲಿನ ಸುಭಾಶ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪ್ರಶಸ್ತಿಗಳನ್ನು ಕೂಡ ವಿತರಿಸಿದ್ದಾರೆ. ನೈಸರ್ಗಿಕ ವಿಕೋಪ ಸಂಭವಿಸಿದಾಗ ಸಲ್ಲಿಸಿದ ಸೇವೆಗೆ ಗೌರವಾರ್ಥವಾಗಿ ಈ ಪ್ರಶಸ್ತಿ ನೀಡಲಾಗುತ್ತೆ. ಈ ಪ್ರಶಸ್ತಿ ಸಂಸ್ಥೆಗೆ ನೀಡಿದ್ರೆ 51 ಲಕ್ಷ ರೂಪಾಯಿ ಜೊತೆಗೆ ಸರ್ಟಿಫಿಕೇಟ್, ಅದೇ ವ್ಯಕ್ತಿಗತವಾಗಿ ನೀಡಿದ್ರೆ 5 ಲಕ್ಷ ರೂಪಾಯಿ ಮತ್ತು ಸರ್ಟಿಫಿಕೇಟ್ ನೀಡಲಾಗುತ್ತೆ.
ಅಂದಹಾಗೆ ಸುಭಾಶ್ ಚಂದ್ರ ಬೋಸ್ 1987ರ ಜನವರಿ 23ರಂದು ಒಡಿಶಾದ ಕಟಕ್ನಲ್ಲಿ ಜನಿಸಿದ್ರು. ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ್ರು. ಗಣರಾಜ್ಯೋತ್ಸವ ಸಾಮಾನ್ಯವಾಗಿ ಜನವರಿ 29ರ ಬೀಟಿಂಗ್ ದಿ ರೀಟ್ರೀಟ್ ಮೂಲಕ ಅಂತ್ಯಗೊಳ್ಳುತ್ತೆ. ಆದ್ರೆ ಈ ಸಲ ಜನವರಿ 30ರಂದು ಅಂದ್ರೆ ಗಾಂಧೀಜಿ ಹತ್ಯೆಯಾದ ದಿನ ಅಂತ್ಯಗೊಳಿಸಲಾಗುತ್ತೆ ಅಂತ ಮೂಲಗಳು ತಿಳಿಸಿವೆ.
ಇನ್ನು ಜನವರಿ 26ರ 73ನೇ ಗಣರಾಜ್ಯೋತ್ಸವ ಪರೇಡ್ಗೆ ಸಿದ್ಧತೆ, ಅಭ್ಯಾಸ ಕೂಡ ಜೋರಾಗಿದೆ. ಇವತ್ತು ದೆಹಲಿಯ ವಿಜಯ ಚೌಕ್ನಲ್ಲಿ ವಿವಿಧ ಪಡೆಯ ಯೋಧರು ಫುಲ್ ಡ್ರೆಸ್ ರಿಹರ್ಸಲ್ ಅಂದ್ರೆ ಫುಲ್ ಸಮವಸ್ತ್ರ ಧರಿಸಿಕೊಂಡು ಅಭ್ಯಾಸ ಮಾಡಿದ್ದಾರೆ. ಮತ್ತೊಂದ್ಕಡೆ ಹೆಲಿಕಾಪ್ಟರ್ಗಳು ಕೂಡ ಹಾರಾಟ ನಡೆಸಿ, ಅಭ್ಯಾಸ ಮಾಡಿವೆ.
-masthmagaa.com
Contact Us for Advertisement