masthmagaa.com:
ರಾಜ್ಯದಲ್ಲಿ ಕೀಳುಮಟ್ಟದ ರಾಜಕಾರಣ ಮುಂದುವರೆದಿದೆ, ಚಡ್ಡಿ ಗಲಾಟೆ ಜೋರಾಗಿಯೇ ನಡೀತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚಡ್ಡಿ ಸುಡುವ ಅಭಿಯಾನ ಮಾಡ್ತೀವಿ ಅಂದಿದ್ದಕ್ಕೆ ಇವತ್ತು ಆರ್ಎಸ್ಎಸ್ ಪ್ರತಿ ಅಭಿಯಾನ ಒಂದನ್ನ ಶುರು ಮಾಡಿದೆ. ಮಂಡ್ಯದ ಆರ್ಎಸ್ಎಸ್ ಕಾರ್ಯಕರ್ತರು ಮನೆ ಮನೆಗೆ ಹೋಗಿ ಚಡ್ಡಿಗಳನ್ನ ಕಲೆಕ್ಟ್ ಮಾಡಿದ್ದಾರೆ. ನಂತ್ರ ಅದನ್ನ ಬಾಕ್ಸ್ನಲ್ಲಿ ಕೆಪಿಸಿಸಿ ಕಚೇರಿ ಮತ್ತು ಸಿದ್ದರಾಮಯ್ಯ ಅವ್ರ ಮನೆಗೆ ಪಾರ್ಸೆಲ್ ಮಾಡೋದಾಗಿ ಹೇಳಿದ್ದಾರೆ. ಇನ್ನು ತುಮಕೂರು ಬಳಿಕ ಈಗ ಚಿತ್ರದುರ್ಗ, ಚಿಕ್ಕಮಗಳೂರಿನಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಆರ್ಎಸ್ಎಸ್ ಚಡ್ಡಿ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ. ಒಟ್ನಲ್ಲಿ ಮಾನ ಮುಚ್ಚಬೇಕಾಗಿದ್ದ ಚಡ್ಡಿ ರಾಜಕೀಯದಲ್ಲಿ ಎಲ್ಲರ ಮಾನ ಹರಾಜ್ ಹಾಕ್ತಿದೆ.
-masthmagaa.com
Contact Us for Advertisement