masthmagaa.com:
ಪಂಜಾಬ್ನ ಗೋಲ್ಡನ್ ಟೆಂಪಲ್ನಲ್ಲಿ ಧರ್ಮ ನಿಂದನೆ ಆರೋಪದಲ್ಲಿ ವ್ಯಕ್ತಿಯ ಹತ್ಯೆ ಬೆನ್ನಲ್ಲೇ ಕಪುರ್ತಲಾದಲ್ಲೂ ಅಂಥದ್ದೇ ಘಟನೆ ವರದಿಯಾಗಿದೆ ಅಂತ ಹೇಳಲಾಗಿತ್ತು. ಆದ್ರೆ ಅದು ಧರ್ಮನಿಂದನೆಯಲ್ಲ.. ಕಳ್ಳತನದ ಘಟನೆ ಅಂತ ಪೊಲೀಸರು ಈಗ ಖಚಿತಪಡಿಸಿದ್ದಾರೆ. ಅದ್ರೆ ಈ ಎರಡೂ ಪ್ರಕರಣಗಳಲ್ಲಿ ಬಲಿಯಾದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಇನ್ನು ಧರ್ಮ ನಿಂದನೆ ಆರೋಪದಲ್ಲಿ ವ್ಯಕ್ತಿಯ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿರೋ ನವಜೋತ್ ಸಿಂಗ್ ಸಿಧು, ಧರ್ಮ ನಿಂದನೆ ಮೂಲಕ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡೋರನ್ನು ಪಬ್ಲಿಕ್ಕಾಗಿ ಹ್ಯಾಂಗ್ ಮಾಡ್ಬೇಕು ಅಂತ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಸಿಖ್ ಸಮುದಾಯದ ವಿರುದ್ಧ ಸಂಚು ರೂಪಿಸಲಾಗ್ತಿದೆ. ಮೂಲಭೂತವಾಗಿ ಪಡೆ ಪಂಜಾಬ್ನಲ್ಲಿ ಶಾಂತಿ ಕದಡೋ ಪ್ರಯತ್ನ ನಡೆಸ್ತಿದ್ದಾರೆ ಅಂತ ಹೇಳಿದ್ದಾರೆ. ಚುನಾವಣೆ ಹತ್ತಿರ ಇರೋದ್ರಿಂದ ಎಲ್ಲಾ ರಾಜಕಾರಣಿಗಳು ಹಿಂದು ಮುಂದು ನೋಡಿ ಹೇಳಿಕೆ ಕೊಡ್ತಿದ್ದಾರೆ. ಯಾಕಂದ್ರೆ ಕಳೆದ ಬಾರಿ ಕೂಡ ಧರ್ಮನಿಂದನೆ ಪ್ರಕರಣಗಳು ಚುನಾವಣೆಯ ಪ್ರಮುಖ ವಿಚಾರಗಳಲ್ಲಿ ಒಂದಾಗಿತ್ತು. ಆದ್ರೆ ಸಿಧು ಮಾತ್ರ ಹೀಗೆ ಬಾಯಿಗ್ ಬಂದಂತೆ ಮಾತಾಡಿದ್ದಾರೆ.
-masthmagaa.com
Contact Us for Advertisement