ʻʻತತ್ಸಮ ತದ್ಬವʼʼ ಮೇಘನಾ ರಾಜ್‌ಗೆ ಸಾಥ್‌ ನಟಿ ಶ್ರುತಿ ಕೃಷ್ಣ..

masthmagaa.com:

ಸ್ಯಾಂಡಲ್‌ವುಡ್‌ಗೆ ಮೇಘನಾ ರಾಜ್‌ ʻತತ್ಸಮ ತದ್ಬವʼ ಸಿನಿಮಾದ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ. ಪತಿ ಚಿರು ಸರ್ಜಾ ಅವರ ನಿಧನದ ಬಳಿಕ ಮಗನ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದ ಮೇಘನಾ ಈಗ ಮತ್ತೇ ತಮ್ಮ ಆ್ಯಕ್ಟಿಂಗ್‌ ಫಿಲ್ಡಗೆ ಬಂದಿದ್ದಾರೆ. ಮಹಿಳಾ ಪ್ರಧಾನ ಚಿತ್ರ ʻತತ್ಸಮ ತತ್ಬವʼ ಸಿನಿಮಾದಲ್ಲಿ ನಾಯಕಿ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಮೇಘನಾಗೆ ಸಾಥ್‌ ನೀಡಲು ಹಿರಿಯ ನಟಿ ಶ್ರುತಿ ಕೃಷ್ಣ ರೆಡಿಯಾಗಿದ್ದಾರೆ. ಇನ್ನೂ ಸಿನಿಮಾದಲ್ಲಿ ನಟಿ ಶೃತಿ ಕೃಷ್ಣ ಸುಮನ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಈ ಹೊಸ ಲುಕ್‌ನ ಪೋಟೊ ಒಂದನ್ನ ಮೇಘನಾ ರಾಜ್‌ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ್ದಾರೆ.
ವಿಶಾಲ್‌ ಅಥ್ರೇಯಾ ನಿರ್ದೇಶನದಲ್ಲಿ ಮೂಡಿಬರಲಿರು ಚಿತ್ರಕ್ಕೆ ಪನ್ನಗ ಭರಣ ನಿರ್ಮಾಣ ಮಾಡಿದ್ದಾರೆ. ಇನ್ನೂ ಚಿತ್ರದ ತಾರಾಗಣದಲ್ಲಿ ಮೇಘನಾ ರಾಜ್‌, ಶ್ರುತಿ ಕೃಷ್ಣ, ಗಿರಿಜಾ ಲೋಕೇಶ್, ನಾಗಾಭರಣ ಪ್ರಮುಖ ಪಾತ್ರ ವಹಿಸಿದ್ದಾರೆ.

-masthmagaa.com

Contact Us for Advertisement

Leave a Reply