masthmagaa.com:
ಪ್ರಾಕೃತಿಕ ವಿಕೋಪದ ಕುರಿತ ಎಚ್ಚರಿಕೆ ಸಂದೇಶವನ್ನ ಟಿವಿ ಸ್ಕ್ರೀನ್ ಹಾಗೂ ರೇಡಿಯೋಗಳಲ್ಲಿ ಬಿತ್ತರಿಸುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತೆ ಅಂತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪ್ರತಿಕೂಲ ಹವಾಮಾನ ಪರಿಸ್ಥಿತಿ ಕುರಿತು ಜನರು ಮುಂಜಾಗ್ರತೆ ವಹಿಸುವಂತೆ ಮತ್ತು ಪ್ರಾಕೃತಿಕ ವಿಕೋಪವನ್ನ ಫೇಸ್ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯನ್ನ ರೂಪಿಸಲಾಗಿದೆ ಅಂತ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ ಮೊದಲ ಹಂತದಲ್ಲಿ ಈಗಾಗಲೇ ಭಾರಿ ಮಳೆ, ಗುಡುಗು ಸಮೇತ ಬಿರುಗಾಳಿ ಮಳೆ ಕುರಿತ ಎಚ್ಚರಿಕೆ ನೀಡುವ ಮೆಸೇಜ್ಗಳನ್ನ ಕಳಿಸುವ ಯೋಜನೆಯನ್ನ ಪ್ರಾರಂಭಿಸಲಾಗಿದೆ ಅಂತ ತಿಳಿಸಿದ್ದಾರೆ.
-masthmagaa.com
Contact Us for Advertisement