masthmagaa.com:
ಕೇಂದ್ರ ಸರ್ಕಾರದ 3 ಕೃಷಿ ಕಾನೂನುಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದ ಮೇಲೂ ರೈತರು ಯಾಕೆ ಧರಣಿ ನಡೆಸುತ್ತಿದ್ದಾರೆ? ಅಂತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಜೊತೆಗೆ ಹೆಚ್ಚಿನ ರೈತರು ಮತ್ತು ತಜ್ಞರು ಕೃಷಿ ಕಾನೂನುಗಳ ಪರವಾಗಿದ್ದಾರೆ. ಹೀಗಾಗಿ ಕಾನೂನು ವಾಪಸ್ ಪಡೆಯೋದನ್ನ ಹೊರತುಪಡಿಸಿ ಬೇರೆ ಏನಾದ್ರೂ ಬೇಡಿಕೆ ಇದ್ದರೆ ಹೇಳಿ. ಸರ್ಕಾರ ಅದರ ಬಗ್ಗೆ ಚರ್ಚಿಸಲು ಸಿದ್ಧವಿದೆ. ಕಾನೂನು ಜಾರಿಗೆ ಸುಪ್ರೀಂಕೋರ್ಟ್ ತಡೆ ನೀಡಿರೋದ್ರಿಂದ ಏನಾದ್ರೂ ವಿಚಾರ ಇದ್ರೆ ಅದನ್ನ ಕಮಿಟಿ ಮುಂದೆ ಇಡಿ. ಮಂಡಿಗಳು, ವ್ಯಾಪಾರ ನೋಂದಣಿ ಸೇರಿದಂತೆ ಇತರ ವಿಚಾರಗಳ ಬಗ್ಗೆ ರೈತರ ಆತಂಕವನ್ನ ಪರಿಹರಿಸಲು ನಾವು ಒಪ್ಪಿದ್ದೇವೆ ಅಂತ ರೈತ ಸಂಘಟನೆಗಳಿಗೆ ಕಳಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದ್ದೇವೆ ಅಂತ ಹೇಳಿದ್ರು.
-masthmagaa.com
Contact Us for Advertisement