masthmagaa.com:
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂದ್ರೆ ಏಮ್ಸ್ ವಿದ್ಯಾರ್ಥಿಗಳು ಮಾಡಿರೋ ನಾಟಕವೊಂದು ಭಾರಿ ವಿರೋಧಕ್ಕೆ ಕಾರಣವಾಗಿದೆ. ರಾಮಾಯಣಕ್ಕೆ ಮಾಡರ್ನ್ ಟಚ್ ಕೊಟ್ಟು ಈ ನಾಟಕ ಮಾಡಿದ್ದು, ಶ್ರೀರಾಮನನ್ನು ವನವಾಸಕ್ಕೆ ಕಳುಹಿಸುವಂತೆ ಕೈಕೆ ಕೇಳಿಕೊಳ್ಳುವ ಸನ್ನಿವೇಶವನ್ನು ಅಪಮಾನಕರ ರೀತಿಯಲ್ಲಿ ಬಿಂಬಿಸಲಾಗಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇದ್ರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಅಂತ ನೆಟ್ಟಿಗರು ಕಿಡಿಕಾರಿದ್ರು. ಇದ್ರ ಬೆನ್ನಲ್ಲೇ ಏಮ್ಸ್ ಸ್ಟೂಡೆಂಟ್ ಅಸೋಸಿಯೇಷನ್ ಕ್ಷಮೆಯಾಚಿಸಿದೆ. ಇದ್ರ ಹಿಂದೆ ಯಾರಿಗೂ ನೋವುಂಟು ಮಾಡೋ ಉದ್ದೇಶ ಇರಲಿಲ್ಲ. ಆದ್ರೂ ನಾವು ಕ್ಷಮೆಯಾಚಿಸ್ತೀವಿ. ಇನ್ಮುಂದೆ ಇಂಥಹ ಘಟನೆಗಳು ನಡೆಯೋದಿಲ್ಲ ಅಂತ ಭರವಸೆ ನೀಡ್ತೀವಿ ಅಂತ ಹೇಳಿದೆ.
-masthmagaa.com
Contact Us for Advertisement