ಕೊಟ್ಟ ಮಾತನ್ನ ಉಳಿಸಿಕೊಂಡ ಆಂಧ್ರಪ್ರದೇಶ ಸಿಎಂ ಜಗನ್ಮೋಹನ ರೆಡ್ಡಿ

masthmagaa.com:

ಆಂಧ್ರ ಸಿಎಂ ಜಗನ್ಮೋಹನ ರೆಡ್ಡಿಯ ಸಂಪುಟಕ್ಕೆ ಹೊಸ ಸಚಿವರ ಸೇರ್ಪಡೆಯಾಗಲಿದ್ದು ಅವರೆಲ್ಲಾ ನಾಳೆಯೇ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಹೊಸ ಮುಖಗಳಿಗೆ ಮಣೆ ಹಾಕುವ ಸಲುವಾಗಿ ಎರಡು ದಿನಗಳ ಹಿಂದೆಯಷ್ಟೇ ಸಿಎಂ ಒಬ್ಬರನ್ನ ಬಿಟ್ಟುಇಡೀ ಮಂತ್ರಿ ಮಂಡಲವೇ ಸಾಮೂಹಿಕ ರಾಜೀನಾಮೆ ನೀಡಿತ್ತು. ಅದರಂತೆ ಜಗನ್‌ ಸಂಪುಟಕ್ಕೆ ಈಗ ಹೊಸತಂಡ ಸೇರ್ಪಡೆಯಾಗ್ತಿದೆ. ತಮ್ಮ ಆಡಳಿತಾವಧಿಯ ಅರ್ಧದಲ್ಲಿ ಸಂಪುಟವನ್ನು ಕಂಪ್ಲೀಟಾಗಿ ರೀಶಫಲ್ ಮಾಡೋದಾಗಿ ಜಗನ್ ಮೋಹನ್ ರೆಡ್ಡಿ ಮಾತು ನೀಡಿದ್ರು. ಅದರಂತೆ ಈಗ ನಡೆದುಕೊಂಡಿದ್ದಾರೆ. ಸಂಪುಟದ ಎಲ್ಲಾ 24 ಸಚಿವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಹೊಸದಾಗಿ ರಚನೆಯಾಗ್ತಿರೋ ಸಂಪುಟದಲ್ಲಿ ಎಸ್​​ಸಿ, ಎಸ್​​ಟಿ ಮತ್ತು ಹಿಂದುಳಿದ ವರ್ಗಗಳಿಗೆ 68 ಪರ್ಸೆಂಟ್​ನಷ್ಟು ಪ್ರಾತಿನಿಧ್ಯ ನೀಡಲಾಗಿದೆ. ಈ ಹಿಂದೆ ಅವರ ಸಂಪುಟದಲ್ಲಿ ಈ ವರ್ಗಗಳಿಗೆ 56 ಪರ್ಸೆಂಟ್​​ನಷ್ಟು ಪ್ರಾತಿನಿಧ್ಯ ನೀಡಲಾಗಿತ್ತು.

-masthmagaa.com

Contact Us for Advertisement

Leave a Reply