masthmagaa.com:
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಕೊಂದಿರುವುದು ತಾನೇ ಎಂದು ಹೇಳಿಕೊಂಡಿರುವ ಗೋಲ್ಡಿ ಬ್ರಾರ್ ಈಗ ಸಲ್ಮಾನ್ ಖಾನ್ನನ್ನ ಕೊಲ್ಲುವುದೇ ನನ್ನ ಗುರಿ ಅಂತ ಹೇಳಿದ್ದಾರೆ. ಅದೂ ಕೂಡ ಸಂದರ್ಶನದಲ್ಲಿ. ಈ ಹಿಂದೆ ಸಲ್ಮಾನ್ ಖಾನ್ಗೆ ಬಿಷ್ಣೊಯ್ ಗ್ಯಾಂಗ್ ಕಡೆಯಿಂದ ಕೊಲೆ ಬೆದರಿಕೆ ಬರ್ತಾ ಇತ್ತು. ಹಾಗಾಗಿ ಸಲ್ಮಾನ್ ಖಾನ್ಗೆ ಪೊಲೀಸರು ಬಿಗಿ ಬಂದೋಬಸ್ತ್ ಕೂಡ ನೀಡಿದ್ರು. ಶಾಕಿಂಗ್ ವಿಚಾರ ಏನಂದ್ರೆ ಇಂಡಿಯಾ ಟುಡೇ ನಡೆಸಿದ ಸಂದರ್ಶನದಲ್ಲಿ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ ಕೂಡ ಸಲ್ಮಾನ್ ಖಾನ್ರ ಹತ್ಯೆಯ ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾನೆ. ಈ ವಿಷಯ ಈಗ ಹೊರ ಬಿದ್ದಿದೆ. ಹಲವು ರಾಜ್ಯ ಮತ್ತು ರಾಷ್ಟ್ರದಲ್ಲಿ ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಆಗಿರುವ ಗೋಲ್ಡಿ ಬ್ರಾರ್ ಜೊತೆ ಫೋನ್ ಮೂಲಕ ಇಂಟರ್ವ್ಯೂ ಮಾಡಿದ ಟೈಮ್ನಲ್ಲಿ ಆತ ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ್ದಾನೆ. ‘ಸಲ್ಮಾನ್ ಖಾನ್ನನ್ನು ಖಂಡಿತಾ ಕೊಲೆ ಮಾಡುತ್ತೇವೆ’ ಅಂತ ಶಪಥ ಮಾಡಿದ್ದಾನೆ. ಈ ಹಿಂದೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯಿಂದ ಸಲ್ಮಾನ್ ಖಾನ್ಗೆ ಬೆದರಿಕೆ ಪತ್ರಗಳು ಬಂದಿದ್ದವು. ಈಗ ಗೋಲ್ಡಿ ಬ್ರಾರ್ ಕೂಡ ಸಲ್ಮಾನ್ ಖಾನ್ರನ್ನ ಕೊಲೆ ಮಾಡ್ತೀನಿ ಅಂತ ಹೇಳಿದ್ದಾನೆ.
‘ಸಲ್ಮಾನ್ ಖಾನ್ನನ್ನು ಖಂಡಿತಾ ಕೊಲ್ಲುತ್ತೇವೆ. ಆತ ಬಿಷ್ಣೋಯ್ ಸಮುದಾಯಕ್ಕೆ ಅವಮಾನ ಮಾಡಿದ್ದಾನೆ. ನಾವು ಪವಿತ್ರವೆಂದು ತಿಳಿಯುವ ಕೃಷ್ಣಮೃಗವನ್ನು ಅವನು ಸಾಯಿಸಿದ್ದಾನೆ. ಕ್ಷಮೆ ಕೇಳಬೇಕು ಅಂತ ಒತ್ತಾಯಿಸಲಾಗಿತ್ತು. ಆದರೆ ಅವನು ಕ್ಷಮೆ ಕೇಳಿಲ್ಲ. ಸಲ್ಮಾನ್ ಖಾನ್ ಮಾತ್ರವಲ್ಲದೇ ನಮ್ಮ ಎಲ್ಲ ಶತ್ರುಗಳನ್ನೂ ನಾವು ಕೊಲ್ಲುತ್ತೇವೆ’ ಎಂದು ಗೋಲ್ಡಿ ಬ್ರಾರ್ ಹೇಳಿದ್ದಾನೆ.
-masthmagaa.com
Contact Us for Advertisement