masthmagaa.com:
ಶಾರುಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ತನಿಖೆ ನಡೆಸಿದ್ದ ಸಮೀರ್ ವಾಂಖೆಡೆಯನ್ನ ಚೆನೈಗೆ ವರ್ಗಾವಣೆ ಮಾಡಲಾಗಿದೆ. ಇವ್ರು ಆರ್ಯನ್ ಖಾನ್ ಭಾಗಿಯಾಗಿದ್ದ ಕ್ರೂಸ್ ಶಿಪ್ನಲ್ಲಿ ಮಾದಕ ವಸ್ತುಗಳಬಳಕೆ ಸಂಬಂಧ ತನಿಖೆ ನಡೆಸಿದ್ರು. ಆದ್ರೆ ಇದೀಗ ಇವ್ರು ಅಷ್ಟೊಂದು ಸರಿಯಾಗಿ ತನಿಖೆ ನಡೆಸಿಲ್ಲ ಕಳಪೆಯಾಗಿ ತನಿಖೆ ನಡೆಸಿದ್ದಾರೆ ಅಂತ ದೂರುಗಳು ಕೇಳಿ ಬರ್ತಾ ಇದೆ. ಇದರ ಬೆನ್ನಲ್ಲೆ ಮಾಜಿ NCB ಅಧಿಕಾರಿಯಾಗಿದ್ದ ಸಮೀರ್ ವಾಂಖೆಡೆಯವರನ್ನ ತೆರಿಗೆದಾರರ ಸೇವೆಗಳ ಮಹಾನಿರ್ದೇಶನಾಲಯದ ಪ್ರಧಾನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಅಂದಹಾಗೆ ಆರ್ಯನ್ ಖಾನ್ಗೆ ಈ ಕೇಸ್ನಿಂದ ಕ್ಲೀನ್ ಚೀಟ್ ಸಿಕ್ಕಿದೆ.
-masthmagaa.com
Contact Us for Advertisement