masthmagaa.com:
ಕ್ರೂಸ್ಶಿಪ್ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರೋ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಬಾಂಬೆ ಹೈಕೋರ್ಟ್ನಲ್ಲಿ ನಡೀತು. ಆದ್ರೆ ಇವತ್ತು ವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಆರ್ಯನ್ ಖಾನ್ಗೆ ಜಾಮೀನು ನೀಡಬಾರದು ಅಂತ ಎನ್ಸಿಬಿ ಅಧಿಕಾರಿಗಳು ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ರು. ಇದೊಂದು ಅಂತಾರಾಷ್ಟ್ರೀಯ ಮಾದಕ ವಸ್ತು ಜಾಲವಾಗಿದ್ದು, ಇದನ್ನು ಭೇದಿಸಲು ಏಜೆನ್ಸಿಗೆ ಸ್ವಲ್ಪ ಟೈಂ ಬೇಕು. ಒಂದ್ವೇಳೆ ಆರ್ಯನ್ ಖಾನ್ಗೆ ಜಾಮೀನು ನೀಡಿದ್ರೆ ತನಿಖೆಯ ಮೇಲೆ ಪರಿಣಾಮ ಬೀರಬಹುದು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಹುದು. ಸಾಕ್ಷ್ಯ ನಾಶಪಡಿಸೋ ಸಾಧ್ಯತೆ ಇರುತ್ತೆ ಅಂತ ಎನ್ಸಿಬಿ ಅಫಿಡವಿಟ್ನಲ್ಲಿ ಉಲ್ಲೇಖಿಸಿತ್ತು.
ಇನ್ನು ಆರ್ಯನ್ ಖಾನ್ ಪರ ವಕೀಲರು ಎನ್ಸಿಬಿ ಮತ್ತು ಪ್ರಕರಣದ ಪ್ರಮುಖ ಸಾಕ್ಷಿ ಕೆಪಿ ಗೋಸವಿಯ ಬಾಡಿಗಾರ್ಡ್ ಪ್ರಭಾಕರ್ ಸೈಲ್ ಸಲ್ಲಿಸಿದ್ದ ಅಫಿಡವಿಟ್ಗೆ ಉತ್ತರ ನೀಡಿದ್ದಾರೆ. ಪ್ರಭಾಕರ್ ಸೈಲ್ ನಿನ್ನೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಸಮೀರ್ ವಾಂಖೆಡೆಗೆ 8 ಕೋಟಿ ರೂಪಾಯಿ ದುಡ್ಡು ನೀಡಲಾದ ಆರೋಪ ಮಾಡಿದ್ರು. ಆದ್ರೆ ಆರ್ಯನ್ ಖಾನ್ಗೆ ಪ್ರಭಾಕರ್ ಸೈಲ್ ಯಾರಂತಾನೇ ಗೊತ್ತಿಲ್ಲ. ಎನ್ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡುವಾಗ ಆರ್ಯನ್ ಬಳಿ ಮಾದಕ ವಸ್ತು ಇರಲಿಲ್ಲ. ಸೇವಿಸಿಯೂ ಇರಲಿಲ್ಲ ಅಂತ ಆರ್ಯನ್ ಪರ ವಕೀಲರು ಉತ್ತರ ನೀಡಿದ್ದಾರೆ. ಜೊತೆಗೆ ಮಾಧ್ಯಮ, ಸಾಮಾಜಿಲ ಜಾಲತಾಣಗಳಲ್ಲಿ ಮಾಡಲಾಗ್ತಿರೋ ಆರೋಪಗಳಿಗೂ ಆರ್ಯನ್ಗೂ ಸಂಬಂಧವೇ ಇಲ್ಲ ಅಂತ ಕೂಡ ಆರ್ಯನ್ ಖಾನ್ ಪರ ವಕೀಲರು ನೀಡಿರೋ ಪ್ರತಿಕ್ರಿಯೆಯಲ್ಲಿದೆ.
-masthmagaa.com
Contact Us for Advertisement