ಶ್ರೀರಾಮಮಂದಿರ ಪ್ರತಿಷ್ಠಾಪನೆ: ಮೋದಿಯವ್ರ 11 ದಿನಗಳ ವ್ರತ!

masthmagaa.com:

ಅಯೋಧ್ಯೆ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾಪನೆಯ 11 ದಿನಗಳ ಮುಂಚೆ ಅಂದ್ರೆ ಜನವರಿ 11 ರಂದು ಪಿಎಂ ನರೇಂದ್ರ ಮೋದಿ ಕಠಿಣ ವ್ರತವನ್ನ ಆಚರಿಸೋಕೆ ಪ್ರಾರಂಭಿಸಿದ್ರು. ಈ ವ್ರತದ ಭಾಗವಾಗಿ ನರೇಂದ್ರ ಮೋದಿಯವ್ರಿಗೆ ಪ್ರತಿದಿನ ಸಾಕಷ್ಟು ಕ್ರಮಗಳನ್ನ ಪಾಲಿಸ್ಬೇಕಾಗುತ್ತೆ. ಅದ್ರ ಬಗ್ಗೆ ಹೇಳೋದಾದ್ರೆ, ಈ ಟೈಮ್‌ಲ್ಲಿ ಅವ್ರು ಆರಾಮಾಗಿ ಬೆಡ್‌ ಮೇಲೆ ಮಲಗದೇ, ನೆಲದ ಮೇಲೇ ಮಲಗ್ಬೇಕು. ಇಡೀ ದಿನ ಏನೂ ತಿನ್ನದೇ ಬರೀ ಎಳನೀರನ್ನ ಕುಡಿಬೇಕು. 11 ದಿನಗಳ ಕಾಲ ದಿನ ಬಿಡದೇ ಗೋಪೂಜೆ ಮಾಡ್ಬೇಕು, ಗೋವುಗಳಿಗೆ ಆಹಾರ ನೀಡ್ಬೇಕು. ಪ್ರತೀದಿನ ಅನ್ನದಾನ, ವಸ್ರ್ತದಾನಗಳಂತಹ ದಾನಗಳನ್ನ ಮಾಡ್ಬೇಕು. ಈ ಎಲ್ಲಾ ರೀತಿಯ ಕ್ರಮವನ್ನ ಪಾಲಿಸುವಂತೆ ಪ್ರತಿಜ್ಞೆ ಮಾಡಿದ್ದ ಮೋದಿಯವ್ರಿಗೆ ಜನವರಿ 22ರವರೆಗೆ ಇವೆಲ್ಲಾ ಒಂಥರಾ ರುಟಿನ್‌ ಆಗೋದ್ರಲ್ಲಿದೆ.

-masthmagaa.com

Contact Us for Advertisement

Leave a Reply