masthmagaa.com:
ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಲಾಕ್ಡೌನ್ ಭೀತಿ ಎದುರಾಗಿದೆ. ಈ ಸಂಬಂಧ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಹಲವು ಸಲಹೆಗಳನ್ನು ನೀಡಿದೆ. ಇದೇ ರೀತಿ ಕೇಸ್ ಹೆಚ್ಚಾಗ್ತಾ ಹೋದ್ರೆ ಲಾಕ್ಡೌನ್ ಅನಿವಾರ್ಯ ಅನ್ನೋದು ಪ್ರಮುಖ ಸಲಹೆಯಾಗಿದೆ. ಯೆಸ್.. ವಾರದ ಪಾಸಿಟಿವಿಟಿ ದರ 5 ಪರ್ಸೆಂಟ್ ಜಾಸ್ತಿಯಾದ್ರೆ, ಐಸಿಯು ಬೆಡ್ಗಳು 40 ಪರ್ಸೆಂಟ್ಗಿಂತ ಜಾಸ್ತಿ ಭರ್ತಿಯಾದ್ರೆ ಲಾಕ್ಡೌನ್ ಮಾಡೋದು ಅಗತ್ಯ.. ಸದ್ಯ ಮೂರು ವಲಯಗಳನ್ನು ಘೋಷಿಸಿ.. 1 ಮತ್ತು ಒಂದಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರೋ ಜಿಲ್ಲೆಗಳನ್ನು ಯೆಲ್ಲೋ ಝೋನ್ ಅಂತ ಘೋಷಿಸಿ.. 1ರಿಂದ 2ರವರೆಗೆ ಪಾಸಿಟಿವಿಟಿ ದರ ಇರೋ ಜಿಲ್ಲೆಗಳನ್ನು ಆರೆಂಜ್ ಝೋನ್ ಅಂತ ಘೋಷಿಸಿ.. ಅದೇ ರೀತಿ 2 ಪರ್ಸೆಂಟ್ಗಿಂತ ಹೆಚ್ಚು ಪಾಸಿಟಿವಿಟಿ ದರ ಇರೋ ಜಿಲ್ಲೆಗಳನ್ನು ರೆಡ್ ಝೋನ್ ಅಂತ ಘೋಷಿಸಿ..ಝೋನ್ಗೆ ತಕ್ಕಂತೆ ನಿರ್ಬಂಧಗಳನ್ನು ವಿಧಿಸಿ.. ಅದೇ ಪಾಸಿಟಿವಿಟಿ ದರ 5 ಪರ್ಸೆಂಟ್ಗಿಂತ ಜಾಸ್ತಿ ಆದ್ರೆ ಲಾಕ್ಡೌನ್ ಮಾಡಿ ಅಂತ ತಜ್ಞರ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ 2ನೇ ಅಲೆಯ ಆರಂಭದಲ್ಲೂ ತಜ್ಞರ ಸಮಿತಿ ಇದೇ ರೀತಿಯ ಎಚ್ಚರಿಕೆ ನೀಡಿತ್ತು. ಆದ್ರೆ ಸರ್ಕಾರ ಸ್ವಲ್ಪ ತಡವಾಗಿ ಲಾಕ್ಡೌನ್ ಮಾಡ್ತು. ಇದ್ರಿಂದ ಎಷ್ಟೆಲ್ಲಾ ಪ್ರಾಬ್ಲಂ ಆಯ್ತು ಅನ್ನೋದನ್ನ ಇಡೀ ರಾಜ್ಯವೇ ನೋಡಿದೆ. ಸೋ ಈ ಸಲ ಸರ್ಕಾರ ಕಳೆದ ವರ್ಷದ ರೀತಿ ರಿಸ್ಕ್ ತಗೊಳ್ಳೋದು ಅನುಮಾನ.. ತಜ್ಞರ ಸಲಹೆಯಂತೆಯೇ ಲಾಕ್ಡೌನ್ ಮಾಡಿದ್ರೂ ಅಚ್ಚರಿಯಿಲ್ಲ..
-masthmagaa.com
Contact Us for Advertisement