ಪಂಜಾಬ್​​​​ನಲ್ಲಿ ಸಚಿವರಿಗೆ ಸಿಎಂ ಟಾರ್ಗೆಟ್ ಫಿಕ್ಸ್​​​!

masthmagaa.com:

ಪಂಜಾಬ್​ನಲ್ಲಿ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಸಿಎಂ ಭಗವಂತ್ ಮನ್ ಟಾರ್ಗೆಟ್ ಕೊಟ್ಟಿದ್ದಾರೆ. ಒಂದ್ವೇಳೆ ಆ ಟಾರ್ಗೆಟ್ ರೀಚ್ ಆಗದೇ ಇದ್ರೆ ಸಚಿವರನ್ನು ತೆಗೆದು ಹಾಕುವಂತೆ ಜನ ಮನವಿ ಮಾಡ್ಬೋದು ಅಂತ ಕೂಡ ಅರವಿಂದ್ ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ. ಜೊತೆಗೆ ಪ್ರಮಾಣ ವಚನ ಸ್ವೀಕರಿಸಿದ ಮೂರೇ ದಿನಗಳಲ್ಲಿ ಭಗವಂತ್ ಮನ್ ಹಲವು ಕೆಲಸಗಳನ್ನು ಮಾಡಿದ್ಧಾರೆ. ಹಳೆಯ ಸಚಿವರುಗಳಿಗೆ ನೀಡಿದ್ದ ಭದ್ರತೆಯನ್ನು ತೆಗೆದು ಜನರಿಗೆ ನೀಡಿದ್ದಾರೆ. ನಾಶವಾದ ಬೆಳೆಗೆ ಪರಿಹಾರ ಕೊಟ್ಟಿದ್ದಾರೆ. ಭ್ರಷ್ಟಾಚಾರ ನಿಗ್ರಹ ಸಂಬಂಧ ಹೆಲ್ಪ್​​ಲೈ್ನ ಅನೌನ್ಸ್​ ಮಾಡಿದ್ದಾರೆ..ವಿವಿಧ ಇಲಾಖೆಗಳಲ್ಲಿ ಖಾಲಿ ಇರೋ 25 ಸಾವಿರ ಮತ್ತು ಪೊಲೀಸ್ ಇಲಾಖೆಯ 10 ಸಾವಿರ ಹುದ್ದೆಗಳ ಭರ್ತಿಗೂ ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಂತ ಮಾಹಿತಿ ನೀಡಿದ್ರು.

-masthmagaa.com

Contact Us for Advertisement

Leave a Reply