masthmagaa.com:

ಮುಂದಿನ ವಿಧಾನಸಭೆ ಚುನಾವಣೆಗೆ ಈ ಮುಖ್ಯಮಂತ್ರಿಯನ್ನ, ಅಂದ್ರೆ ಸಿಎಂ ಯಡಿಯೂರಪ್ಪ ಅವರನ್ನ ತಗೊಂಡು ಹೋದ್ರೆ ಬಿಜೆಪಿ ಕಥೆ ಅಷ್ಟೇ. ರಾಜ್ಯದಲ್ಲಿ ಬಿಜೆಪಿಯನ್ನ ಜೀವಂತವಾಗಿ ಉಳಿಸಬೇಕು ಅಂದ್ರೆ ಸಿಎಂ ಬದಲಾವಣೆ ಮಾಡೋದು ಅನಿವಾರ್ಯ ಅಂತ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಯತ್ನಾಳ್​ಗೆ ತಿರುಗೇಟು ಕೊಟ್ಟಿರೋ ಬಿಜೆಪಿ ಶಾಸಕ ರೇಣುಕಾಚಾರ್ಯ, ‘ಯಡಿಯೂರಪ್ಪ ಅವರನ್ನ ಬದಲಾವಣೆ ಮಾಡೋಕೆ ನೀನ್ಯಾರೋ’ ಅಂತ ಏಕವಚನದಲ್ಲಿ ಹರಿಹಾಯ್ದಿದ್ದಾರೆ. ಜೊತೆಗೆ ಬಿಜೆಪಿಗೂ ಯತ್ನಾಳ್​ಗೂ ಯಾವುದೇ ಸಂಬಂಧವಿಲ್ಲ ಅನ್ನೋ ರೀತಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೇ ಹೇಳಿಕೆ ಕೊಟಿದ್ದಾರೆ. ಹೀಗಾಗಿ ಯತ್ನಾಳ್​ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಅವರನ್ನ ಪಕ್ಷದಿಂದ ಉಚ್ಛಾಟನೆ ಮಾಡಲು ವರಿಷ್ಠರಿಗೆ ಆಗ್ರಹಿಸುತ್ತೇವೆ ಅಂತಾನೂ ರೇಣುಕಾಚಾರ್ಯ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply