masthmagaa.com:
ಜಾರ್ಖಂಡ್ನಲ್ಲಿ ತಲೆ ಎತ್ತಿರೋ ನೂತನ ವಿಧಾನಸಭೆ ಕಟ್ಟಡದಲ್ಲಿ ಮುಸ್ಲಿಂ ಶಾಸಕರು ನಮಾಝ್ ಅಥವಾ ಪ್ರಾರ್ಥನೆ ಮಾಡಲು ಒಂದು ರೂಮನ್ನ ಸರ್ಕಾರ ಅಲಾಟ್ ಮಾಡಿರೋದು ವಿವಾದಕ್ಕೆ ಕಾರಣವಾಗಿದೆ. ಜಾರ್ಖಂಡ್ ಸರ್ಕಾರದ ಈ ನಡೆಯಿಂದ ಸಿಟ್ಟಿಗೆದ್ದಿರೋ ಬಿಜೆಪಿ ನಾಯಕರು, ನಮಾಝ್ಗೆ ರೂಮ್ ಕೊಟ್ಟಿದ್ದಕ್ಕೆ ನಮಗೆ ಬೇಸರವಿಲ್ಲ. ವಿಧಾನಸಭೆ ಆವರಣದಲ್ಲಿ ಬೇರೆ ಬೇರೆ ಧರ್ಮದ ಧಾರ್ಮಿಕ ಕೇಂದ್ರಗಳನ್ನ ತೆರೆಯಲು ಕೂಡ ಅವಕಾಶ ಕೊಡ್ಬೇಕು. ನಾವು ಕೂಡ ಹನುಮಾನ್ ಚಾಲಿಸಾವನ್ನ ಪಠಿಸುತ್ತೀವಿ. ಸ್ಪೀಕರ್ ಅನುಮತಿ ಕೊಟ್ರೆ ನಮ್ಮ ದುಡ್ಡಲ್ಲೇ ದೇವಸ್ಥಾನ ಕಟ್ತೀವಿ ಅಂತ ಬಿಜೆಪಿ ನಾಯಕರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರೋ ಸ್ಪೀಕರ್, ಪ್ರತಿ ಶುಕ್ರವಾರ ನಮಾಝ್ ಮಾಡಕ್ಕೋಸ್ಕರ ಕಲಾಪವನ್ನ ಅರ್ಧಗಂಟೆ ಮುಂದೂಡಿಕೆ ಮಾಡಬೇಕಿತ್ತು. ಅಲ್ಲದೆ ಹಿಂದಿನ ವಿಧಾನಸಭೆ ಕಟ್ಟಡದಲ್ಲೂ ನಮಾಝಿಗೆ ಪ್ರತ್ಯೇಕ ಜಾಗ ಇತ್ತು. ಆದ್ರೆ ಹೊಸ ಕಟ್ಟಡದಲ್ಲಿ ನಮಾಝಿಗೆ ಅಂತ ಪ್ರತ್ಯೇಕ ಸ್ಥಳ ಇರಲಿಲ್ಲ. ಹೀಗಾಗಿ ಪ್ರತ್ಯೇಕ ರೂಮನ್ನ ಕೊಟ್ಟಿದ್ದೇವೆ ಎಂದಿದ್ದಾರೆ. ಅಂದ್ಹಾಗೆ ಜಾರ್ಖಂಡ್ನಲ್ಲಿ ಜೆಎಂಎಂ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರವಿದೆ. ಬಿಜೆಪಿ ವಿರೋಧ ಪಕ್ಷವಾಗಿದೆ.
-masthmagaa.com
Contact Us for Advertisement