masthmagaa.com:
ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ಡೈರೆಕ್ಟಾಗಿ ದುಡ್ಡು ಹಾಕಲು ನೇರ ನಗದು ವರ್ಗಾವಣೆ ಅಂದ್ರೆ ಡಿಬಿಟಿ ಅನ್ನೋ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಇವತ್ತು ಸಿಎಂ ಯಡಿಯೂರಪ್ಪ ಅದಕ್ಕೆ ಚಾಲನೆ ಕೂಡ ಕೊಟ್ಟಿದ್ದಾರೆ. ಇದೇ ವೇಳೆ ಮಾತನಾಡಿ ರಾಜ್ಯ ಸರ್ಕಾರದ 120 ಯೋಜನೆಗಳನ್ನು ಡಿಬಿಟಿ ಆ್ಯಪ್ ಜೊತೆ ಜೋಡಿಸಲಾಗಿದೆ. ಕೊರೋನಾ ಮೊದಲ ಮತ್ತು 2ನೇ ಅಲೆಯ ಪರಿಹಾರವನ್ನು ಕೂಡ ಇದ್ರ ಮೂಲಕವೇ ನೀಡಲಾಗುತ್ತೆ. ಈಗಾಗಲೇ ಆಧಾರ್ ಲಿಂಕ್ ಆಗಿರೋ ಖಾತೆಗಳನ್ನು ಹೊಂದಿರೋ ಫನಾನುಭವಿಗಳಿಗೆ ನೇರವಾಗಿಯೇ ಪರಿಹಾರ ನೀಡಲಾಗ್ತಿದೆ. ಈಗ ಈ ಆಪ್ ಮೂಲಕ ಆ ಕೆಲಸ ಮಾಡ್ತೀವಿ. ಇದ್ರಿಂದ ಹಣದ ದುರುಪಯೋಗ ಮತ್ತು ಮದ್ಯವರ್ತಿಗಳ ಹಾವಳಿ ತಪ್ಪುತ್ತೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement