masthmagaa.com:
ಮುಂಬರುವ ವಿಧಾನಸಭಾ ಚುನಾವಣೆಗೆ ಸಿಎಂ ಬೊಮ್ಮಾಯಿಗೆ ನಟ ಸುದೀಪ್ ಬೆಂಬಲ ತೋರಿಸಿದ ಬೆನ್ನಲ್ಲೇ, ಮತ್ತೋರ್ವ ನಟ ಪ್ರಕಾಶ್ ರಾಜ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ಆದ್ರೆ ಈ ಜಗಳಕ್ಕೆ ಎಂಟ್ರಿಯಾಗಿರೋ ನಟ ಚೇತನ್, ಇಬ್ಬರೂ ಪ್ರತಿಭಾವಂತ ನಟರು. ಒಬ್ಬರು ಬಿಜೆಪಿ ಪರ ಮತ್ತೊಬ್ಬರು ಬಿಜೆಪಿ ವಿರೋಧಿ. ಇಬ್ಬರು ಕೂಡ ಜೂಜಿನ ಜಾಹೀರಾತುಗಳ ಮೂಲಕ ಹೆಚ್ಚು ಹಣವನ್ನ ಗಳಿಸಿದ್ದಾರೆ ಅಂತ ಇಬ್ಬರ ವಿರುದ್ದವೂ ಹರಿಹಾಯ್ದಿದ್ದಾರೆ. ಜೊತೆಗೆ ಸಿನಿಮಾ ತಾರೆಯೊಬ್ರು ಬಿಜೆಪಿ ಪಕ್ಷಕ್ಕೆ ಸೇರಿದ್ರೆ ಉದಾರವಾದಿಗಳು ಅದನ್ನ ಮಾರಾಟ ಅಂತ ಯಾಕೆ ಹೇಳ್ತಾರೆ? ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್, ಜೆಡಿಎಸ್, ಆಪ್ನಂಥ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ ಮಾರಾಟ ಆಗಿದ್ದಾರೆ ಅಂತ ಪ್ರಕಾಶ ರೈ ಅವ್ರಿಗೆ ಚೇತನ್ ಟಾಂಗ್ ಕೊಟ್ಟಿದ್ದಾರೆ.
-masthmagaa.com
Contact Us for Advertisement