ಟ್ರೋಲ್‌ ಬಳಿಕ ನ್ಯಾಯಾಧೀಶರ ಸ್ಥಾನದ ಬಗ್ಗೆ ಸುಪ್ರೀಂ ಮುಖ್ಯಸ್ಥರ ಮಾತು!

masthmagaa.com:

ಸಾಮಾನ್ಯರು, ಸೆಲೆಬ್ರಿಟಿಗಳು ಟ್ರೋಲ್‌ಗೆ ಒಳಗಾಗೋದು ಮಾಮೂಲು. ಆದ್ರೀಗ ಈ ಟ್ರೋಲ್‌ ಭೂತ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರನ್ನೂ ಬಿಟ್ಟಿಲ್ಲ. ಫೇಕ್‌ ನ್ಯೂಸ್‌ ಮತ್ತು ಟ್ರೋಲ್‌ಗೆ ಒಳಗಾಗಿರೋದನ್ನ ಖುದ್ದು CJI ಡಿ.ವೈ. ಚಂದ್ರಚೂಡ್‌ ಹೇಳ್ಕೊಂಡಿದ್ದಾರೆ. ʻವಿಚಾರಣೆ ಒಂದ್ರ ವೇಳೆ ಡಿಸ್‌ಕಂಫರ್ಟ್‌ ಆಗಿದ್ರಿಂದ ಚೇರ್‌ ಸರಿಪಡಿಸಿಕೊಂಡೆ. ಆದ್ರೆ ಆ ವಿಡಿಯೋವನ್ನ ಕೆಲವರು ನಾನು ಏಳೋ ಸಮಯಕ್ಕೆ ಸರಿಯಾಗಿ ಕಟ್‌ ಮಾಡಿ, ವಿಚಾರಣೆ ಮಧ್ಯೆನೇ ನಾನು ಹೊರ ನಡೀತಾ ಇದೀನಿ ಅನ್ನೋ ರೀತಿ ಬಿಂಬಿಸಿದ್ದಾರೆ. ಫೇಕ್‌ ಟ್ರೋಲ್‌ ಮಾಡಿದ್ದಾರೆ. ಆದ್ರೆ ನ್ಯಾಯಾಧೀಶರು ಹಾಗು ನ್ಯಾಯಾಂಗದ ಅಧಿಕಾರಿಗಳು ಈ ಒತ್ತಡಗಳನ್ನ ನಿಭಾಯಿಸ್ಬೇಕು. ವರ್ಕ್‌ಲೈಫ್‌ ಬ್ಯಾಲೆನ್ಸ್‌ ಮಾಡ್ಬೇಕುʼ ಅಂತ ರಾಜ್ಯದ ನ್ಯಾಯಾಂಗ ಅಧಿಕಾರಿಗಳ ಕಾರ್ಯಕ್ರಮವೊಂದ್ರಲ್ಲಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply