ನನ್ನಲ್ಲೂ ಕಾಶ್ಮೀರಿ ಗುಣ ಇದೆ ಅಂದಿದ್ಯಾಕೆ ರಾಹುಲ್ ಗಾಂಧಿ?

masthmagaa.com:

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್ ಪಡೆದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರಕ್ಕೆ ಹೋಗಿರೋ ರಾಹುಲ್ ಗಾಂಧಿ ಇವತ್ತು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಿ, ಸ್ವತಂತ್ರ ಮತ್ತು ಮುಕ್ತವಾಗಿ ಚುನಾವಣೆ ನಡೆಸಬೇಕು. ಜಮ್ಮು ಕಾಶ್ಮೀರ ಮತ್ತು ಪೆಗಾಸಸ್ ವಿಚಾರವನ್ನು ಮಾತನಾಡಲು ಬಿಡ್ತಾನೇ ಇಲ್ಲ. ಇದು ಜಮ್ಮುಕಾಶ್ಮೀರದ ಮೇಲೆ ನೇರ ಹೊಡೆತ. ಅದೇ ದೇಶದ ಉಳಿದ ಭಾಗಗಳಿಗೆ ಪರೋಕ್ಷ ಹೊಡೆತ ಅಂತ ಹೇಳಿದ್ದಾರೆ. ನಮ್ಮ ಕುಟುಂಬ ಕೂಡ ಝೀಲಂ ನದಿ ನೀರು ಕುಡಿದಿದೆ. ಕಾಶ್ಮೀರಿ ಗುಣ ನನ್ನಲ್ಲೂ ಇದೆ ಅಂತ ಹೇಳಿದ್ರು. ಇನ್ನು ಗುಲಾಂ ನಬಿ ಆಜಾದ್ ಮಾತನಾಡಿ, ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಬೇಕು. 1990ರ ದಶಕದಲ್ಲಿ ಉಗ್ರರ ಭಯದಿಂದ ಕಾಶ್ಮೀರ ಬಿಟ್ಟು ಹೋದ ಪಂಡಿತರನ್ನು ವಾಪಸ್ ಕರೆತರಬೇಕು. ಚುನಾವಣೆ ನಡೆಸಬೇಕು ಅಂತ ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply