masthmagaa.com:
ಮಾಜಿ ಸಿಎಂ ಸಿದ್ದರಾಮಯ್ಯನವ್ರನ್ನ ಉಲ್ಲೇಖಿಸಿ ಸಿದ್ರಾಮುಲ್ಲಾ ಖಾನ್ ಅಧಿಕಾರಕ್ಕೆ ಬಂದ್ರೆ ಹಿಂದೂಗಳ ಹತ್ಯೆಯಾಗುತ್ತೆ. ನಾವು ಅಧಿಕಾರಕ್ಕೆ ಬಂದ್ರೆ ಹಿಂದೂ ಅರ್ಚಕರ ನೇಮಕವಾಗುತ್ತೆ ಅಂತ ಬಿಜೆಪಿ ಶಾಸಕ ಸಿಟಿ ರವಿ ಹೇಳಿಕೊಂದನ್ನ ನೀಡಿದ್ದಾರೆ. ಚಿಕ್ಕಮಗಳೂರಿನ ಕೊಪ್ಪಾದಲ್ಲಿ ನಡಿತಿರೊ ಜನ ಸಂಕಲ್ಪ ಸಮಾವೇಶದಲ್ಲಿ ಮಾತನಾಡೊ ವೇಳೆ ಹಿಂದೂ ಶಬ್ದಕ್ಕೆ ಕೆಟ್ಟ ಅರ್ಥವಿದೆ ಅಂದಿದ್ದ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಎಲೆಕ್ಶನ್ ಬಂದಾಗ ಮಾತ್ರ ನಾನು ಹಿಂದು. ಆಮೇಲೆ ಕುಂಕುಮ ಕಂಡರೆ ಆಗಲ್ಲ ಅಂತಾರೆ. ಈಗಿರೋರು ಇಟಲಿ ಗಾಂಧಿಗಳು ಅಂತ ಟೀಕಿಸಿದ್ದಾರೆ. ಇತ್ತ ಸರ್ಕಾರ ಬಂದ್ರೆ ಮುಸ್ಲಿಂ ಅಭ್ಯರ್ಥಿಯನ್ನ ಸಿಎಂ ಮಾಡ್ತೇವೆ ಅಂದಿದ್ದ ಜೆಡಿಎಸ್ಗೆ ಪ್ರತಿಕ್ರಯಿಸಿದ ಸಿಟಿ ರವಿ, ಅವರಪ್ಪನಾಣೆ ಅಧಿಕಾರಕ್ಕೆ ಬರಲ್ಲ. ಮುಸ್ಲಿಂರಿಗೆ ತುಪ್ಪವನ್ನ ನೆಕ್ಕಲು ಅಲ್ಲ, ಮೂಸೋದಕ್ಕೂ ಬಿಡಲ್ಲ ಅಂತ ಕಿಡಿಕಾರಿದ್ದಾರೆ.
-masthmagaa.com
Contact Us for Advertisement