masthmagaa.com:
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಹಿಂದೂಗಳ ಮತಗಳನ್ನ ಸೆಳೆಯಲು ಬಿಜೆಪಿ ರಾಮಮಂದಿರವನ್ನ ಸ್ಫೋಟಿಸಿ ಮುಸ್ಲಿಂರ ಮೇಲೆ ಆರೋಪ ಮಾಡುವ ಸಾಧ್ಯತೆಗಳಿವೆ ಅಂತ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಹೇಳಿದ್ದಾರೆ. ಪಾಟೀಲ್ ಈ ರೀತಿ ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನ ಶೇರ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಹಿಂದೂ-ಮಸ್ಲಿಂರ ನಡುವೆ ಕೋಮು ಉದ್ವಿಗ್ನೆತೆಯನ್ನ ಉಂಟು ಮಾಡೋಕೆ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಅಂತ ಆರೋಪಿಸಿದೆ.
-masthmagaa.com
Contact Us for Advertisement