ಗೆರೆ ಎಳೆದು ರಸ್ತೆಯಲ್ಲಿ ನಿಂತ ದೀದಿ..! ಕೊರೋನಾ ಜಾಗೃತಿ ವಿಡಿಯೋ ನೋಡಿ…

masthmagaa.com:

ಪಶ್ಚಿಮ ಬಂಗಾಳ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್​ಡೌನ್ ಮಾಡಲಾಗಿದೆ. ಈ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಎಲ್ಲರೂ ಜಾಗೃತಿ ಮೂಡಿಸುತ್ತಿದ್ದಾರೆ. ಅದೇ ರೀತಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಜಾಗೃತಿ ಮೂಡಿಸಿದ್ದಾರೆ. ರಸ್ತೆ ಬದಿಯ ಹಣ್ಣು ಮತ್ತು ತರಕಾರಿ ಅಂಗಡಿ ಬಳಿ ಬಂದ ಮಮತಾ ಬ್ಯಾನರ್ಜಿ, ಅಲ್ಲಲ್ಲಿ ಚಾಕ್​ಪೀಸ್​​ನಿಂದ ವೃತ್ತ ಎಳೆದು ಗ್ರಾಹಕರು ನಿಲ್ಲಲು ವ್ಯವಸ್ಥೆ ಮಾಡಿದ್ದಾರೆ. ಬಿಳಿ ಸೀರೆ ಉಟ್ಟಿರೋ ದೀದಿ, ಮುಖಕ್ಕೆ ಕರ್ಚೀಫ್ ಹಿಡಿದುಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಶೇರ್ ಮಾಡಿರುವ ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್, ವರ್ಣಿಸಲು ಪದಗಳಿಲ್ಲ ಎಂದು ಬರೆದುಕೊಂಡಿದ್ದಾರೆ.

ಆದ್ರೆ ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ, ಚಾಕ್​​ಪೀಸ್​​ನಲ್ಲಿ ಗೆರೆ ಎಳೆದು ನಿಲ್ಲುತ್ತಿದ್ದಾರೆ. ಆದ್ರೆ ಅವರ ಹಿಂದಿರೋ ಜನ ಗುಂಪು ಗುಂಪಾಗಿ ನಿಂತಿರೋದು ಅವರ ಗಮನಕ್ಕೆ ಬಂದಿಲ್ಲ. ಹೀಗಾಗಿ ಇದನ್ನು ಮಾರ್ಕ್​ ಮಾಡಿರೋ ಕೆಲವರು ಹೌದು ಇದನ್ನು ವರ್ಣಿಸಲು ಸಾಧ್ಯವೇ ಇಲ್ಲ ಎಂದು ಕಾಲೆಳೆದಿದ್ದಾರೆ.

Image

-masthmagaa.com

 

Contact Us for Advertisement

Leave a Reply