masthmagaa.com:
ರಾಜಸ್ಥಾನ: ಬನಿಯನ್ ಧರಿಸಿಕೊಂಡು ವಿಚಾರಣೆಗೆ ಹಾಜರಾದ ಲಾಯರ್ ವಿರುದ್ಧ ರಾಜಸ್ಥಾನ ಹೈಕೋರ್ಟ್ ಜಡ್ಜ್ ಕಿಡಿಕಾರಿದ್ದಾರೆ. ದೇಶದಲ್ಲಿ ಲಾಕ್ಡೌನ್ ಇರೋದ್ರಿಂದ ಕೋರ್ಟ್ ಕಲಾಪಗಳು ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಡೆಯುತ್ತಿವೆ. ಅದೇ ರೀತಿ ಇವತ್ತು ಹೈಕೋರ್ಟ್ ಜಡ್ಜ್ ಸಂಜೀವ್ ಪ್ರಕಾಶ್ ಶರ್ಮಾ ಅವರ ಪೀಠದಲ್ಲಿ ಲಾಲ್ರಾಮ್ ಎಂಬ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ನಡೆಯಿತು.. ಈ ವೇಳೆ ಆರೋಪಿ ಪರ ವಕೀಲರಾದ ರವೀಂದ್ರ ಕುಮಾರ್ ಪಲಿವಾಲ್ ಬನಿಯನ್ ಧರಿಸಿ ವಿಡಿಯೋ ಕಾನ್ಫರೆನ್ಸ್ಗೆ ಬಂದಿದ್ದರು. ಇದ್ರಿಂದ ಕೆರಳಿದ ಜಡ್ಜ್ ಸರಿಯಾದ ರೀತಿಯಲ್ಲಿ ಸಮವಸ್ತ್ರ ಧರಿಸಿಕೊಂಡು ಬನ್ನಿ ಎಂದು ಕಿಡಿಕಾರಿದ್ದಾರೆ.
ಜೊತೆಗೆ ಜಾಮೀನು ಅರ್ಜಿಯನ್ನು ವಜಾಗೊಳಿಸಲು ಮುಂದಾದ್ರು. ಆಗ ಸರ್ಕಾರಿ ಪರ ವಕೀಲರು, ಪ್ರತಿವಾದಿ ವಕೀಲರು ಮಾಡಿದ ತಪ್ಪಿಗೆ ಆರೋಪಿಗೆ ಶಿಕ್ಷೆ ನೀಡಬೇಡಿ ಎಂದು ನ್ಯಾಯಾಧೀಶರ ಬಳಿ ಮನವಿ ಮಾಡಿದ್ರು. ಹೀಗಾಗಿ ಪ್ರಕರಣದ ವಿಚಾರಣೆಯನ್ನು ನ್ಯಾ.ಸಂಜೀವ್ ಪ್ರಕಾಶ್ ಶರ್ಮಾ ಮೇ.5ಕ್ಕೆ ಮುಂದೂಡಿದ್ದಾರೆ. ಅಲ್ಲದೆ ಸರಿಯಾದ ರೀತಿಯಲ್ಲಿ ಯೂನಿಫಾರ್ಮ್ ಹಾಕಿಕೊಂಡು ಬರಬೇಕು ಎಂದು ವಕೀಲರಿಗೆ ಎಚ್ಚರಿಸಿದ್ದಾರೆ.
-asthmagaa.com
Contact Us for Advertisement