masthmagaa.com:
ದೇಶಕ್ಕೆ ರಬ್ಬರ್ ಸ್ಟ್ಯಾಂಪ್ ಅಥವಾ ಸೀಲ್ ಒತ್ತುವ ರಾಷ್ಟ್ರಪತಿ ಬೇಡ. ಬದಲಿಗೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವ, ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ರಾಷ್ಟ್ರಪತಿ ಬೇಕು ಅಂತ ಪ್ರತಿಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಹೇಳಿದ್ದಾರೆ. ಮೊನ್ನೆಯಷ್ಟೆ ದ್ರೌಪದಿ ಮುರ್ಮು ರಾಷ್ಟ್ರಪತಿ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರವನ್ನ ಪ್ರಧಾನಿ ಮೋದಿ ಓದಿದ್ರು. ಇದನ್ನ ಟೀಕಿಸಿರೋ ಯಶವಂತ್ ಸಿನ್ಹಾ, ಅವರೇ ತಯಾರಿಸಿರುವ ನಾಮಪತ್ರವನ್ನ ಅವರೇ ಓದುತ್ತಾರೆ ಅಂತ ಕಿಡಿಕಾರಿದ್ದಾರೆ.
-masthmagaa.com
Contact Us for Advertisement