ಮಸೀದಿ & ಕುರಾನ್​ ಸುಟ್ಟು ಹಾಕಿದ್ದಾರೆ ಎಂದ ಮಹಿಳಾ ಪತ್ರಕರ್ತರು ಅರೆಸ್ಟ್

masthmagaa.com:

ತ್ರಿಪುರಾದ ಗೋಮತಿ ಜಿಲ್ಲೆಯಲ್ಲಿ ಮಸೀದಿ ಮತ್ತು ಕುರಾನ್​ ಅನ್ನ ಸುಟ್ಟು ಹಾಕಲಾಗಿದೆ ಅಂತ ಸುಳ್ಳು ಸುದ್ದಿ ಹರಡಿ ಕೋಮುಗಲಭೆ ಸೃಷ್ಟಿಸಲು ಪ್ರಯತ್ನಿಸಿದ ಆರೋಪದಲ್ಲಿ ತ್ರಿಪುರ ಪೊಲೀಸರು ಇಬ್ಬರು ಮಹಿಳಾ ಪತ್ರಕರ್ತರನ್ನ ಅರೆಸ್ಟ್ ಮಾಡಿದ್ದಾರೆ. HW News Networkನ ಸಮೃದ್ಧಿ ಕೆ ಸಕುನಿಯಾ ಮತ್ತು ಸ್ವರ್ಣ ಝಾ ಬಂಧಿತರು. ಅರೆಸ್ಟ್ ಆದ ಬೆನ್ನಲ್ಲೇ ಇಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಇನ್ನು ಪತ್ರಕರ್ತರ ಅರೆಸ್ಟ್ ಬಗ್ಗೆ ಮಾತನಾಡಿದ ಪೊಲೀಸರು, ಇಬ್ಬರ ನಡವಳಿಕೆ ಮತ್ತು ತನಿಖೆಗೆ ಸಹಕರಿಸದ ಹಿನ್ನೆಲೆ ನಮಗೆ ಅವರ ಮೇಲ ಅನುಮಾನ ಬಂದಿತ್ತು. ಹೀಗಾಗಿ ನೀವು ಹೇಳ್ತಿರೋ ವಿಚಾರಕ್ಕೆ ಸಂಬಂಧಿಸಿದಂತೆ ಅಗರ್ತಲಾಗೆ ಬಂದು ಸಾಕ್ಷಿ ನೀಡಲು ಸೂಚಿಸಿದ್ವಿ. ಆದ್ರೆ ಅವರು ತ್ರಿಪುರಾವನ್ನ ತೊರೆದು ಅಸ್ಸಾಂಗೆ ಓಡಿಹೋದ್ರು. ಹೀಗಾಗಿ ಅವರನ್ನ ಅರೆಸ್ಟ್ ಮಾಡಿದ್ವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply